ನಿಶ್ಚಲವಾಗಿರದೇ ಜೀವ ನದಿಯಂತೆ ಸಂಚರಿಸುತ್ತಲೇ ಇರಬೇಕು ----- ಸಂಚಲ
Share with friendsನಾನು, ನನ್ನದು, ನನ್ನಿಂದಲೇ ಎಂಬುದು ಸುಟ್ಟು ನಾಶವಾಗಲಿ. ಮರದಂತೆ ಪರೋಪಕಾರಾರ್ಥ ಗುಣವು ಬೆಳೆದು ಹೆಮ್ಮರವಾಗಲಿ..!! ✍️ ಅಚಲ ಬಿ ಹೆನ್ಲಿ
ನಮ್ಮ ಆಚಾರ ವಿಚಾರವನ್ನು ಅರಿತವರು, ಎಂದೆಂದಿಗೂ ನಮ್ಮವರು..!! ಅಪಚಾರ, ಅಪಪ್ರಚಾರ ಎಂದಿಗೂ ಸಲ್ಲದು..!! ✍️ ಅಚಲ ಬಿ ಹೆನ್ಲಿ
ಬುದ್ಧಿಯನ್ನು ಚುರುಕುಗೊಳಿಸುವ ಹಿತವಾದ ಹರಟೆ ಇರಲಿ. ಆದರೆ, ಬುದ್ಧಿಗೆ ಮಂಕು ತಂದು, ಸಮಯ ಹಾಳು ಮಾಡುವ ಕಾಡು ಹರಟೆಗೆ ಕಡಿವಾಣ ಇರಲಿ...! ✍️ ಅಚಲ ಬಿ ಹೆನ್ಲಿ
ತಪ್ಪು ಮಾಡಿದಾಗ ತಾಳ್ಮೆಯಿಂದ ಇರುವುದು ಸರಿ. ಆದರೆ ಮಾಡಿದ ತಪ್ಪನ್ನು ತಿದ್ದಿಕೊಳ್ಳದೇ ಪುನರಾವರ್ತಿಸಿದಾಗ, ತಾಳ್ಮೆಯಿಂದ ಇರುವುದು ಅದೆಷ್ಟು ಸರಿ...! ✍️ ಅಚಲ ಬಿ ಹೆನ್ಲಿ
ಮನಸ್ಸೆಂಬ ಮನೆಯ ಕದವನ್ನ ಒಳ್ಳೆಯ ಆಲೋಚನೆಗಳ ಆಗಮನಕ್ಕೆ ಎಂದಿಗೂ ಮುಚ್ಚಿ, ಬೀಗ ಜಡಿಯಬೇಡ. ಒಳ್ಳೆಯದಕ್ಕೆ ಯಾವಾಗಲೂ ಸುಸ್ವಾಗತವನ್ನ ಕೋರುತ್ತಿರು..!! ✍️ ಅಚಲ ಬಿ ಹೆನ್ಲಿ
ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಸಾವಧಾನತೆ ಮನಸ್ಸಿನಲ್ಲಿ ಧೈರ್ಯ ಮೂಡಿಸಿ, ಸಕಾರಾತ್ಮಕವಾಗಿ ಮುಂದುವರೆಯಲು ಪ್ರೇರೇಪಿಸುತ್ತದೆ.... ✍️ ಅಚಲ ಬಿ ಹೆನ್ಲಿ
ಸುಖ, ಶಾಂತಿ, ನೆಮ್ಮದಿ ಎಲ್ಲಿ ಸಿಗುವುದೆಂದು ಕಂಡ ಕಂಡ ಜಾಗದಲೆಲ್ಲ ಅನ್ವೇಷಿಸಿದೆ. ಸಿಕ್ಕ ಸಿಕ್ಕವರನ್ನೆಲ್ಲ ಕೇಳಿದೆ, ಆದರೆ ಸಮರ್ಪಕ ಉತ್ತರ ಮಾತ್ರ ಸಿಗಲಿಲ್ಲ. ಕೊನೆಗೆ ನನ್ನೇ ನಾನು ಕೇಳಿಕೊಂಡೆ, ಉತ್ತರವಾಗಿ "ಕನ್ನಡಿಯ ಮುಂದೆ ಹೋಗಿ ನಿಂತೆ...!!" ✍️ ಅಚಲ ಬಿ ಹೆನ್ಲಿ
ಜೀವನದಲ್ಲಿ ಗೆಲ್ಲಬೇಕೆಂದರೆ ದೃಢತೆ, ಆತ್ಮವಿಶ್ವಾಸ, ಸಕಾರಾತ್ಮಕ ಮನೋಭಾವ, ಮಾಡಿಯೇ ತೀರುತ್ತೇನೆ ಎಂಬ ಛಲ ಸದಾ ಮೈಮನಸ್ಸುಗಳಲ್ಲಿ ಹರಿಯುತ್ತಿರಬೇಕು..!! ✍️ ಅಚಲ ಬಿ ಹೆನ್ಲಿ