ಕೃಷ್ಣ
ಕೃಷ್ಣ
ಏನು ಮಾಡಿದರೇನು ಹರಿಯ ಕಾಣದಿರೆ
ಏನು ಪಟಿಸಿದರೇನು ಮಾಧವ ಆಲಿಸದಿರೆ
ಅದೆಂತಹ ಪಾಪದ ಮೂಟೆ ಹೊತ್ತಿಹೆನೋ
ಕಲ್ಲಾಗಿ ಮೌನದಿ ನಿಂತಿಹೆ ಅಲುಗಾಡದೆ ನೀನು
ಕರುಣೆ ಇಂದ ಕರೆಯದೆ ಎನ್ನ ಬಾಳು ಬೆಳಗದು
ಅಪವಾದಗಳ ಭಾರವ ಹೊತ್ತು ಬದುಕೆನು
ಬಕುತಿಯಲಿ ಹುರುಳಿಲ್ಲ ನಿನ್ನಾಣೆ ಕೇಳೋ
ಭವ ಬಂದನಗಳ ಬಿಡಿಸಿ ಸಲಹೊ ಮುರಾರಿ
ಮನವೆಲ್ಲ ನೊಂದಿಹುದು, ಮುಳ್ಳುಗಳಂತೆ
ಹೃದಯದಲಿ ಭಯವುಂಟು ಏನೂ ಅರಿಯದೆ
ನಾನು ಏನೆಂದು ನೀನೇ ಬಲ್ಲೆ ಸ್ವಾಮಿ
ತಪ್ಪುಗಳನ್ನು ಒಪ್ಪ ಮಾಡೋ ದೊರೆಯೇ
ಕಲಿಯುಗವೊಂದು ಪಾಪಿಗಳ ಕೂಪವು
ನಾವುಗಳೇನೋ ಸೂತ್ರದಾರವು
ದನಿಯ ಆಲಿಸಿ ಮುಕುತಿಯ ನೀಡೋ
ದೇವನಿರುವ ನಂಬಿಕೆಯ ಉಳಿಸೋ