ಶ್ರೀ ಕಾತ್ಯಾಯಿನಿ ದೇವಿ
ಶ್ರೀ ಕಾತ್ಯಾಯಿನಿ ದೇವಿ
ನಶಿಸುವ ಬದುಕಿಗೆ ಹೊಸ ಚಿಗುರು
ಬೂದಿ ಮುಚ್ಚಿದ ಕೆಂಡದಂತೆ
ಹೊತ್ತು ಮುಳುಗಿದರು
ಅಡಗಿದ ಸೂಪ್ತ ಶಕ್ತಿಯಂತೆ
ಭೂವಿಯೊಮ್ಮೆ ಅಂಗಲಾಚಿದರೂ
ಕಳೆದ ಶಕ್ತಿಯ ಮರುಭರಣದಂತೆ
ಭಯ,ಶೋಕ ಸಂತಾಪಗಳನ್ನು
ಕಷ್ಟ, ದುಃಖ, ನೋವುಗಳನ್ನು
ಹತ್ತಿಕ್ಕಿ ದೂರ ನೂಕುವಾಕೆ
ಮಹಿಷಾಸುರ ರಾಕ್ಷಸನ ಸಂಹಾರಕೆ
ಕಾತ್ಯಾಯಿನಿ ಅವತಾರವೆತ್ತಿದವಳು
ತ್ರಿಮೂರ್ತಿಗಳ ತೇಜಸ್ಸಿನಿಂದಲೇ
ಕಾತ್ಯಮಹರ್ಷಿಯ ಪೂಜೆಯಿಂದಲೇ
ಕಾತ್ಯಾಯಿನಿ ನಾಮಕರಣ
ನಾಲ್ಕು ಕೈಗಳಿಂದ ಸುಶೋಭಿತೆ
ಅಭಯ ಮತ್ತು ವರಮುದ್ರೆಯ
ಎಡಗೈಲಿ ಖಡ್ಗ, ಕಮಲ ಧರಿಸಿದಾಕೆ
ದಶಮಿಯಂದು ಮಹಿಷನ ವಧಿಸಿದಾಕೆ
ಮೋಕ್ಷದತ್ತ ದಾರತೋರಿದಾಕಿ
ಕಾತ್ಯಾಯಿನಿ ಜಗದ ರಕ್ಷಕಿ
ನವರಾತ್ರಿಯ ಆರನೇ ಮಹಾತಾಯಿ
ಕಾತ್ಯಾಯಿನಿ ದೇವಿಗೆ ನಮನ..