ಕಷ್ಟಪಟ್ಟರೆ ಇಷ್ಟ ಸಿಗುವುದು
ಕಷ್ಟಪಟ್ಟರೆ ಇಷ್ಟ ಸಿಗುವುದು
ಒಂದು ಚಿಕ್ಕ ಹಳ್ಳಿ ಇತ್ತು. ಆ ಹಳ್ಳಿಯಲ್ಲಿ ಎಲ್ಲರೂ ಕೃಷಿಯನ್ನೇ ಪ್ರಧಾನ ಕಸುಬಾಗಿ ಅವಲಂಬಿಸಿಕೊಂಡಿದ್ದರು. ಆ ಹಳ್ಳಿಯಲ್ಲಿ ಒಂದು ಬಡ ಕುಟುಂಬ. ಎರಡು ಗಂಡು ಮಕ್ಕಳು ಅವರ ತಂದೆ ತಾಯಿ, ತಂದ ಕೃಷಿ ಮಾಡುತ್ತಿದ್ದರು. ಇವರೇ ದುಡಿದು ಕುಟುಂಬವನ್ನು ಸಾಕುತ್ತಿದ್ದರು. ಈಗ ನಾನು ಕಷ್ಟಪಟ್ಟರೆ ಮುಂದೆ ನನ್ನ ಮಕ್ಕಳು ಕಲಿತು ಒಳ್ಳೆಯ ಉದ್ಯೋಗ ಲಭಿಸಿ ನಮ್ಮನ್ನು ಸಾಕಬಹುದು ಎಂಬುದು ಇವರ ದೃಢ ನಂಬಿಕೆ. ಅದರಂತೆಯೇ ಅವರನ್ನು ಚೆನ್ನಾಗಿ ಓದಿಸಿದರು. ಆದರೆ ಇಬ್ಬರಿಗೂ ಕಲಿಯುವುದರಲ್ಲಿ ಆಸಕ್ತಿ ಇರಲಿಲ್ಲ. ಕಲಿಯುವುದೆಂದರೆ ಎಲ್ಲಿಲ್ಲದ ಕೋಪ. ಆದರೂ ತಂದೆಯ ಒತ್ತಾಯಕ್ಕಾಗಿ ಶಾಲೆಗೆ ಹೋಗುತ್ತಿದ್ದರು. ಆದರೆ ಇವರಿಗೇನು ಗೊತ್ತು ತಂದೆ ಎಷ್ಟು ಕಷ್ಟಪಡುತ್ತಿದ್ದಾರೆಂದು, ಎರಡು ಹೊತ್ತು ಉಣ್ಣಲು ಅಪ್ಪ ತಂದು ಹಾಕುತ್ತಿದ್ದರು. ಕಷ್ಟ ಏನೆಂದು ತಿಳಿದಿರಲಿಲ್ಲ. ಹತ್ತನೇ ತರಗತಿ ಪಾಸಾದರು. ಅದೇಗೆ ಪಾಸಾದರೋ ಅವರಿಗೇ ಗೊತ್ತು. ಮಕ್ಕಳು ಪಾಸಾದುದನ್ನು ಕಂಡು ತಂದೆ ತಾಯಿಗೆ ಆಶ್ಚರ್ಯವಾಯಿತು. ಹತ್ತನೇ ತರಗತಿ ಪಾಸಾಗಿದ್ದೇವಲ್ಲಾ ಇಷ್ಟು ಸಾಕು ಎಂದು ಕಲಿಯುವುದನ್ನು ನಿಲ್ಲಿಸಿ ಹಳ್ಳಿಯ ಪಡ್ಡೆ ಹುಡುಗರೊಂದಿಗೆ ಅಲೆಮಾರಿಯಂತ ತಿರುಗಾಡುತ್ತಿದ್ದರು. ಕಲಿತು ಒಳ್ಳೆಯ ಉದ್ಯೋಗ ಮಾಡುವುದು ಬಿಡಿ, ತಂದೆಯೊಂದಿಗೆ ಕೃಷಿ ಮಾಡಲು ಕೂಡ ಇವರಿಗೆ ಅಹಂಕಾರ. ಕೃಷಿಯ ಕಡೆಗೆ ಮುಖವೇ ಹಾಕುತ್ತಿರಲಿಲ್ಲ.
ಆದರೆ ಒಂದು ದಿನ ಕೃಷ್ಣ ಕೃಷಿಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಅಸ್ವಸ್ಥರಾದರು. ಮನೆಗೆ ಮರಳಿ ಮಲಗಿದರು. ಸ್ವಲ್ಪ ಸಮಯದ ನಂತರ ತನ್ನ ಮಕ್ಕಳನ್ನು ಕರೆದು “ನೋಡು ಮಗ ನಾನು ಇನ್ನು ಸ್ವಲ್ಪ ಸಮಯದಲ್ಲಿ ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತೇನೆಂದರೆ ಮುಖ್ಯವಾದ ವಿಷಯವೇನೆಂದರೆ ಗದ್ದೆಯಲ್ಲಿ ನಿಧಿ ಇದೆ” ಎಂದು ಹೇಳಿ ಕೊನೆಯುಸಿರೆಳೆದನು. ಮನೆಯವರಿಗೆ ಸಾವಿನ ಸುದ್ದಿಯಿಂದ ಆಘಾತವಾಯಿತು. ಮುಂದೇನು ಗತಿ ಎಂದು ಎಲ್ಲರೂ ಯೋಚಿಸುತ್ತಿದ್ದರೆ ಮಕ್ಕಳಿಗೆ ನಿಧಿಯದ್ದೇ ಚಿಂತೆ.
ಇಬ್ಬರೂ ನೂರು ಬಾರಿ ಯೋಚಿಸ ತೊಡಗಿದರು. ಸ್ವಲ್ಪ ದಿವಸಗಳ ನಂಗೆ ಹಾರೆ, ಪಿಕ್ಕಾಸು ಹಿಡಿದು ಗದ್ದೆಕಡೆ ಮುಖ ಮಾಡಿದರು. ಇಷ್ಟು ದಿನ ಈ 4 | ಮುಖ ಮಾಡದ ಇವರು ಈಗೇಕೆ ಹೋಗುತ್ತಿದ್ದಾರೆಂದು ಎಲ್ಲರಿಗೂ ಸಂತರ ಸುದ್ದಿ...! ಆಶ್ಚರ್ಯ ಆಯಿತು. ಗದ್ದೆಗೆ ತೆರಳಿದ ಸಹೋದರರು ಗದ್ದೆಯನ್ನು ಅಗೆಯ ತೊಡಗಿದರು. ಎಷ್ಟೋ ಅಗೆದರ ಏನೂ ಸಿಗಲಿಲ್ಲ. ಈ ಮಣ್ಣು ಒಣಗಿದ ಉಳಿದ ಮಾಡಿದರೆ ಮಣ್ಣು ಸಡಿಲವಾಗಬಹುದು ಎಂದು ತಲೆಯಲ್ಲಿ ಹೊಳೆಯಿತು. ಅದಸ! ಉಳುಮೆ ಮಾಡಿದರು.ಉಳುಮೆ ಮಾಡಿದರೆ ಸಾಕೇ ಬೀಜ ಬಿತ್ತೋಣ ಇನ್ನೂ ಸಡಿಲವಾಗಬಹುದೆ: ಬೀಜ ಬಿತ್ತಿದರು. ಸ್ವಲ್ಪ ದಿನಗಳ ನಂತರ ನೇಜಿ ಬೆಳೆಯಿತು. ಇಬ್ಬರಿ ಆಶ್ಚರ್ಯವಾಯಿತು. ನೇಜಿಯನ್ನು ನೀರಿರುವ ಗದ್ದೆಗೆ ಕಿತ್ತೆಸೆದರು. ಅವರಿಗೆ ತಿಮ್ಮ | ಇರಲಿಲ್ಲ ನೀರಿರುವಲ್ಲಿ ನೆಟ್ಟರೆ ಫಸಲು ಬರುವುದೆಂದು. ಎಸೆದ ನಂತರ ಇದು ಪುನಃ ಅಗೆಯತೊಡಗಿದರು. ಆದರೆ ಎಷ್ಟು ಆಳ ಅಗೆದರು ನಿಧಿಯ ಪತ್ತೆಯ ಅಪ್ಪ ನಮಗೆ ಮೋಸ ಮಾಡಿದರೆಂದು ಅಂದು ಕೊಂಡಿದ್ದರು. ಬಂದ ದಾರಿಗೆ ತಡ | ಇಲ್ಲದಂತೆ ಮರಳಿ ಬಂದರು. ಸ್ವಲ್ಪ ದಿನಗಳ ನಂತರ ಅಣ್ಣ ದಾರಿಯಲ್ಲಿ | ಕೆಲಸವಿಲ್ಲದೆ ನಡೆದುಕೊಂಡು ಹೋಗುತ್ತಿದ್ದಾಗ ಗದ್ದೆಯಲ್ಲಿ ಫಸಲನ್ನು ಕಂಡನು. ಅಪ್ಪ | ತಲೆಯಲ್ಲಿ ಇದನ್ನು ಕೊಯ್ದು ಭತ್ತ ಬೇರ್ಪಡಿಸಿ ಅಕ್ಕಿ ಮಾಡಿ ಮಾರಿದರೆ ಹಣ ಸಿಗಬಹುದೆಂದು ಹೊಳೆಯಿತು. ತಕ್ಷಣವೇ ತಮ್ಮನಲ್ಲಿ ಬಂದು ಹೇಳಿದ. | ದಿವಸವೇ ಕತ್ತಿಯನ್ನು ಹಿಡಿದು ಗದ್ದೆ ಕಡೆ ತಲೆ ಮಾಡಿದರು. ಕೊಯ್ದನ್ನು ಕೊಡಿ ತೊಡಗಿದರು. ಭತ್ತ ಬೇರ್ಪಡಿಸಿ ಅಕ್ಕಿ ಮಾಡಿ ಮಾರಿದರು. ಕೈ ತುಂಬಾ ಹಣ ಆಗ ತಿಳಿಯಿತು ಅಪ್ಪ ನಮಗೆ ಮೋಸ ಮಾಡಿಲ್ಲ ಎಂದು ಸಂತೋಷವಾಗಿ ದುಡಿದ ಹಣದಲ್ಲಿ ಊಟ ಮಾಡಿದರು.