ಪ್ರತಿ ಫಲ
ಪ್ರತಿ ಫಲ
ಸಚಿನ್ ಮತ್ತು ವೃಷಬ್ ಬಾಲ್ಯ ಸ್ನೇಹಿತರು .ಇಬ್ಬರೂ ಬುದ್ಧಿವಂತರು. SSLC ವರೆಗೂ ಒಂದೇ ಶಾಲೆಯಲ್ಲಿ ಓದಿ, ನಂತರ ಬೇರೆಯಾದರೂ ವಿಧ್ಯಾಭ್ಯಾಸದ ನಂತರ ಹೇಗೊ ಮತ್ತೆ ಬೆಂಗಳೂರಲ್ಲಿ ಒಂದಾಗಿದ್ದರು. ಇಬ್ಬರ ಪಾಲಕರೂ ಹಣವಂತರಾಗಿದ್ದರು .ಪೂನಾದಲ್ಲಿ ಇಬ್ಬ ರಿಗೂ ಒಳ್ಳೆಯ ನೌಕರಿ ದೊರೆತು ಮೊದಲ ತಿಂಗಳೇ ಒಂದು ಲಕ್ಷ ರೂಪಾಯಿಗೂ ಹೆಚ್ಚು ಸಂಬಳ. ಕೆಲವು ತಿಂಗಳು PG ಯಲ್ಲಿದ್ದವರು ಒಂದು ಬಾಡಿಗೆ ಮನೆಗೆ ಹೋದರು. ಕಂಡದ್ದು ಕೊಂಡು ಬೇಕಾದ್ದು ಉಂಡು ಬಂದ ಹಣವನ್ನಲ್ಲೇ ಖರ್ಚು ಮಾಡಿ ಮಜಾ ಮಾಡ್ತಿದ್ದರು. ಈ ದಿನ ನಮ್ಮದು ನಾಳೆ ಯಾರದೋ ಅನ್ನೋ ವೈರಾಗ್ಯದ ಮಾತನ್ನೇ ಪಾಲಿಸಿಕೊಂಡು ಬಂದಿದ್ದ ಇವರಿಗೆ ಕೆಟ್ಟ ಹವ್ಯಾಸಗಳು ತಾನಾಗಿಯೇ ಮೈಗೂಡಿತ್ತು. ಎರಡು ಮೂರು ವರ್ಷಗಳ ನಂತರ ಮನೆಯವರ ಒತ್ತಡದ ಕಾರಣ ಇಬ್ಬರಿಗೂ ಮದುವೆಯೂ ಆಯ್ತು . ಮಕ್ಕಳೂ ಆಯ್ತು. ಅವರಿಗೂ ಕೇಳಿದ್ದು ಕೊಡೋಸೋದು ಹೊರ ಗಡೆ ತಿನ್ನೋದು ಊರೂರು ಸುತ್ತೋದು ಮಾಡಿ ಕೊಂಡಿ ದ್ದರು. ಸಚಿನ್ ಗೆ ಹಣ ಬೇಕಾದ್ರೆ ವೃಷಬ್ ಕೊಡ್ತಿದ್ದ , ವೃಷಬ್ ಗೆ ಬೇಕಿದ್ರೆ ಸಚಿನ್ ಕೊಡ್ತಿದ್ದ. ವಾಪಸ್ ಕೊಡ ಬೇಕಿರಲಿಲ್ಲ ಅಷ್ಟು ಅನ್ಯೋನ್ಯತೆ. ಇಬ್ಬರೂ ಹಣದ ವ್ಯವ ಹಾರ ಮಾತ್ರ ಹೆಂಡತಿ ಮಕ್ಕಳಿಗೆ ತಿಳಿಯದ ಹಾಗೆ ಬಹಳ ದಿನ ನೋಡಿ ಕೊಂಡಿದ್ದರು. ಮಕ್ಕಳು ದೊಡ್ಡವರಾಗಿ ಮನೆಯ ಖರ್ಚುಗಳು ಹೆಚ್ಚಾಗಿ ವರಮಾನ ಸಾಲದಾ ಯಿತು . ಬ್ಯಾಂಕ್ ಗಳಲ್ಲಿ ಇಬ್ಬರೂ ಸಾಲ ಮಾಡಿದರು. ಆದರೆ ಇವರ ಕ್ಲಬ್ಬು ಪಬ್ಬು ಇತರ ವೈಯ್ಯಕ್ತಿಕ ಖರ್ಚುಗ ಳನ್ನ ಕಡಿಮೆ ಮಾಡಲು ಇಬ್ಬರ ಮನಸ್ಸೂ ಒಪ್ಪಲಿಲ್ಲ.
ಬಹಳ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದರು. ಅದೇನೆಂದರೆ ತಮಗಿರುವ ಅನುಭವದಿಂದ ಸ್ವಂತ ಉದ್ಯೋಗಮಾಡಿ ಸಂಪಾದಿಸೋದು. ಆದರೆ ಅದು ಬೇರೆ ಯಾವುದಾದರೂ ಊರಲ್ಲಿ .ಇದನ್ನ ಇಬ್ಬರೂ ಅವರ ಹೆಂಡತಿ ಮಕ್ಕಳಿಗೆ ತಿಳಿಸಿ ಎರಡು ವರ್ಷದಲ್ಲಿ ನಾವು ಹೆಚ್ಚು ಹಣ ಆಸ್ತಿ ಎಲ್ಲಾ ಸಂಪಾದನೆ ಮಾಡಿ ಬರ್ತೀವಿ ಆಮೇಲೆ ನೀವು ಇದಕ್ಕಿಂತಲೂ ಹೆಚ್ಚು ಸುಖ ಕಾಣಬಹುದು ಎಂದಾಗ ಇಬ್ಬರೂ ಸಂತೋಷದಿಂದ ಒಪ್ಪಿ ಅಷ್ಟೊಂದು ಹಣ ಎರಡು ವರ್ಷದಲ್ಲಿ ಸಂಪಾದನೆ ಮಾಡೋದಾದ್ರೆ ಈ ದಿನವೇ ಹೋಗಿ ಅಂತ ಕಳುಹಿಸಿ ಕೊಟ್ಟರು .
ಮನೆ ಬಿಟ್ಟು ಬೇರೊಂದು ಊರಿಗೆ ಬಂದರು.ಹೋಟಲ್ ರೂಮ್ ನಲ್ಲಿದ್ದು ದಿನವೂ ಹಲವಾರು ಪ್ರಾಜೆಕ್ಟ್ ಗಳ ಬಗ್ಗೆ ಆಲೋಚನೆ ಮಾಡಿದರು. ಆದರೆ ಯಾವುದೂ ಸರಿ ಹೊಂದದೇ ಇದ್ದಾಗ ಏನು ಮಾಡೋದೋ ಅಂತ ಯೋಚನೆ ಮಾಡ್ತಾ ಒಂದು ವಾರ ಕಳೆದು ಹೋಯ್ತು. ತಂದಿದ್ದ ಹಣ ಖರ್ಚಾಗ್ತಾ ಬಂತು. ಸಚಿನ್ ವೃಷಬ್ ಗಿಂತಲೂ ಸ್ವಲ್ಪ ಬುದ್ದಿವಂತ. ಸಚಿನ್ ಹೇಳ್ದ , ಇದ್ದ ಒಳ್ಳೆ ಕೆಲಸ ಬಿಟ್ಟು ಬಂದಿದ್ದೇವೆ ಮನೆಯಲ್ಲಿ ಹೆಂಡತಿ ಮಕ್ಕಳು ಬೇರೆ. ನಾವು ಇಬ್ಬರೂ ಸೇರಿ ಏನೂ ಮಾಡಲು ಆಗ್ತಿಲ್ಲ. ಎರಡು ವರ್ಷ ಅನ್ನೋದು ಬೇಗ ಬಂದು ಬಿಡುತ್ತೆ. ಒಂದು ಕೆಲಸ ಮಾಡೋಣ ಇಬ್ಬರೂ ಇಲ್ಲಿಂದ ಬೇರೆ ಬೇರೆ ಊರಿಗೆ ಹೋಗಿ ಸ್ವಲ್ಪ ವಿಭಿನ್ನ ರೀತಿಯೇ ಯೋಚ ನೆ ಮಾಡಿ ದುಡಿಯೋಣ. ಎರಡು ವರ್ಷಗಳ ನಂತರ ಮತ್ತೆ ಒಂದಾಗೋಣ ಅಂದಾಗ ಇದೂ ಒಳ್ಳೆಯ ಉಪಾ ಯ ಅಂತ ಅಲ್ಲಿಂದ ಸಚಿನ್ ಮುಂಬೈಗೂ ,ವೃಷಬ್ ದೆಹಲಿಗೂ ಹೊರಟರು. ಈಗ ಕೈಲಿದ್ದ ಹಣವೂ ಖಾಲಿ ಯಾಗಿ ಈಗ ದುಡಿಯಲೇ ಬೇಕಾದ ಅನಿವಾರ್ಯತೆ ಇಬ್ಬರಿಗೂ.
ಸಚಿನ್ ಮಾತಿನಲ್ಲಿ ನಿಸ್ಸೀಮ. ಕಲ್ಲು ಬಂಡೆ ಯನ್ನ ಬೇಕಾದರೂ ಮಾತನಾಡಿಸುವಷ್ಟು ಚಾಣಾಕ್ಷ. ಒಂದು ಖಾಸಗಿ ಕಂಪನಿಯ ಮುಖ್ಯಸ್ಥನ ಬಳಿ ಹೋಗಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ಕಾರ್ಮಿಕರಿಗೆ ಮನವರಿಕೆ ಮಾಡಿಕೊಡಬಲ್ಲೆ ಅವರನ್ನ ಒಂದು ತಿಂಗಳಲ್ಲಿ ಬದಲಾ ಯಿಸಬಲ್ಲೆ ಎಂದಾಗ ಮೂರು ತಿಂಗಳು ಮಾತ್ರ ಸಮಯ ಕೊಟ್ಟು ಅಷ್ಟರಲ್ಲಿ ಬದ ಲಾವಣೆ ಕಂಡರೆ ಮಾತ್ರ ಮುಂದುವರೆಸುವುದಾಗಿ ಹೇಳಿದರು. ಅದಕ್ಕೆ ಒಪ್ಪಿ ಆ ಕಂಪನಿಯ ಕಾರ್ಮಿಕರಿಗೆ ಹಗಲು ರಾತ್ರಿ ತರಗತಿಗಳನ್ನು ನಡೆಸಿ ಕಾರ್ಮಿಕ ಮತ್ತು ಮಾಲೀಕರ ಮಧ್ಯೆ ಒಂದು ಕೊಂಡಿಯಾದ. ಎರಡೂ ಕಡೆ ಇದ್ದ ಹಲವಾರು ತೊಂದರೆ ಅನಾನುಕೂಲತೆ ತೊಡಕುಗಳು ತಾನಾಗಿ ಪರಿಹಾರ ಕಂಡು ವೈಮನಸ್ಸು ಇಲ್ಲದಾಯ್ತು. ಈ ಸಂಗತಿ ಇತರ ಎರಡು ಕಂಪನಿ ಮಾಲೀಕರಿಗೂ ತಿಳಿದು ಇವನ ಸಹಾ ಯ ಪಡೆಯಲು ಆಸಕ್ತಿ ತೋರಿಸಿದರು .ಎರಡು ವರ್ಷಗ ಳ ನಂತರ ಬಿಡುವಿಲ್ಲದೆ ದುಡಿಯುವ ಸಚಿನ್ ಗೆ ನಷ್ಟ ದಲ್ಲಿದ್ದ ಒಂದು ದೊಡ್ಡ ಹಡಗು ನಿರ್ಮಾಣ ಕಂಪನಿ ಯಿಂದ ಪಾಲುದಾರನಾಗಲು ಆಹ್ವಾನ ಬಂತು .ಇವನ ಬುದ್ದಿವಂತಿಕೆಯಿಂದ ಆ ಕಂಪನಿ ಸಹಾ ಬೇಗ ಲಾಭ ಗಳಿಸುವಂತಾಯ್ತು. ಅಲ್ಲಿಂದ ಸಚಿನ್ ಮುಟ್ಟಿದ್ದೆಲ್ಲಾ ಚಿನ್ನ ಆಗ್ತಾ ಹೋಯ್ತು. ಎರಡು ವರ್ಷಗಳ ನಂತರ ಹೆಂಡತಿ ಮಕ್ಕಳನ್ನ ತಾನಿದ್ದ ಕಡೆ ಕರೆಸಿ ಕೊಂಡ. ಈಗ ಸಚಿನ್ ಗೆ ಮಾತನಾಡಲೂ ಸಮಯವಿಲ್ಲದಷ್ಟು ಕೈ ತುಂಬಾ ಕೆಲಸ. ಅವನ ಆತ್ಮೀಯ ಸ್ನೇಹಿತನ ಬಗ್ಗೆ ಯೋಚನೆ ಮಾಡುವುದಕ್ಕೂ ಸಮಯವಿಲ್ಲ. ಆದರೆ ಅವನ ಹೆಂಡತಿ ಮಾತ್ರ ವೃಷಬ್ ನ ಹೆಂಡತಿ ಮಕ್ಕಳ ಬಗ್ಗೆ ತಿಳಿದು ಕೊಳ್ಳಲು ಪ್ರಯತ್ನ ಮಾಡ್ತಾ ಇದ್ದಳಾದರೂ ಎಲ್ಲಿದ್ದಾರೆಂದೇ ತಿಳಿಯಲೇ ಇಲ್ಲ.
ವೃಷಬ್ ಸಚಿನ್ ಗೆ ತದ್ವಿರುದ್ಧ . ಒಂದು ಹೊತ್ತು ಊಟ ಕ್ಕೂ ಪರದಾಟ. ಹಸಿವಿನ ಬೆಲೆ ಈಗ ಗೊತ್ತಾಯ್ತು. ಆಗ ನೀರಿನಂತೆ ಖರ್ಚು ಮಾಡಿದ ಹಣದ ನಿಜವಾದ ಬೆಲೆ ಈಗ ತಿಳಿದು ಕಣ್ಣೀರಿಟ್ಟ. ಹೆಂಡತಿ ಮಕ್ಕಳನ್ನು ನೆನೆದು ದುಃಖ ಪಟ್ಟ. ಇರಲು ನೆಲೆ ಇಲ್ಲ. ಕೂಲಿ ಮಾಡಲು ಶಕ್ತಿ ಇಲ್ಲ. ಉಳಿದ ಒಂದೇ ಮಾರ್ಗ ಭಿಕ್ಷೆ. ಒಂದು ದೇವಸ್ಥಾನ ದ ಮುಂದೆ ಕೂತಾಗ ಬೇರೆ ಭಿಕ್ಷುಕರು ಓಡಿಸಿದರು. ಆ ಸಮಯಕ್ಕೆ ಸರಿಯಾಗಿ ಕಾರಿನಲ್ಲಿ ಅಲ್ಲಿಗೆ ಬಂದ ಒಬ್ಬ ವಯಸ್ಸಾದ ವ್ಯಕ್ತಿ ಇವನನ್ನು ನೋಡಿ ಮಾತನಾಡಿಸಿ ದಾಗ ಎಲ್ಲಾ ವಿಷಯ ಹೇಳಿಕೊಂಡ. ಗೋಪಿಯನ್ನ ಮನೆಗೆ ಕರೆದು ಕೊಂಡು ಹೋದರು. ಹೊಟ್ಟೆ ತುಂಬಾ ಊಟ ಹಾಕಿ, ಮನೆಯಲ್ಲಿ ಎರಡು ಮೂರು ದಿನ ಇರುವಂತೆ ಹೇಳಿದರು. ಮೊದಲು ನನಗೆ ಒಂದು ಕೆಲಸ ಕೊಡಿಸಿ. ಹೀಗೆ ಸುಮ್ಮನೆ ಕೂಡಲು ನನಗೆ ಕಷ್ಟ ಅಂದಾಗ ನಿನ್ನ ಅನುಭವಕ್ಕೆ ತಕ್ಕ ಕೆಲಸ ಕೊಡಿಸುತ್ತೇನೆ ಧೈರ್ಯ ವಾಗಿರು ಎಂದರು. ಮಾರನೆ ದಿನ ಅವರ ಕಾರಲ್ಲಿ ಪಕ್ಕದ ಊರಿನ ಒಂದು ಕಂಪನಿಗೆ ಕರೆದು ಕೊಂಡು ಹೋದರು. ಅಲ್ಲಿನ ಮ್ಯಾನೇಜರ್ ಗೆ ಇವನ ಬಗ್ಗೆ ಎಲ್ಲಾ ತಿಳಿಸಿದರು. ಇಂತಹ ವ್ಯಕ್ತಿ ನಮಗೂ ಅವಶ್ಯಕತೆ ಇದೆ ಅಂತ ಹೇಳಿ ಮಾರನೆ ದಿನದಿಂದ ಕೆಲಸಕ್ಕೆ ಬರಲು ಹೇಳಿದರು. ಇಲ್ಲಿ ಹೊಸದಾಗಿ ಸೇರಿದವರು ಆ ಕಂಪನಿ ಡೈರೆಕ್ಟರ್ ಗಳನ್ನು ಕಾಣ ಬೇಕಿತ್ತು. ವೃಷಬ್ ಸಹಾ ಅವರ ಚೇಂಬರ್ ಹೊರ ಗೆ ಕಾದಿದ್ದ. ವ್ಯಕ್ತಿ ಕಾರಿನಿಂದ ಇಳಿದು ನೇರವಾಗಿ ಚೇಂ ಬರ್ ಒಳಗೆ ಹೋದರು. ಈ ವ್ಯಕ್ತಿಯನ್ನ ಎಲ್ಲೋ ನೋಡಿ ದ್ದೇನೆ ಆದರೆ ನೆನೆಪಿಲ್ಲವಲ್ಲ ಪ್ರಪಂಚದಲ್ಲಿ ಒಬ್ಬರಂತೆ ಏಳು ಜನ ಇರ್ತಾರಂತೆ ಅಂತ ಯಾರೋ ಹೇಳಿದ್ದು ನೆನಪಾಗಿ ಸುಮ್ಮನಾದ. ಅಷ್ಟರಲ್ಲ .ಮಿಸ್ಟರ್ ವೃಷಬ್ ಅಂತ ಒಳಗಡೆಯಿಂದ ಕೂಗಿದಾಗ ಒಳಗೆ ಹೋದ. ಇವ ನ ಫೈಲ್ ನೋಡ್ತಾ ತಲೆ ಬಗ್ಗಿಸಿಕೊಂಡೇ ಎದುರಿಗಿದ್ದ ಕುರ್ಚಿಯ ಕಡೆ ಕೈ ತೋರಿಸಿ ದಾಗಿ ಕುಳಿತು ಕೊಂಡ. ಕಳೆದ ಐದು ವರ್ಷಗಳು ಎಲ್ಲಿ ಕೆಲಸ ಮಾಡಿದ್ದೀರಿ ಅಂತ ತಲೆ ಎತ್ತದೆ ಕೇಳಿದಾಗ ಹಗಲು ಬಸ್ ಸ್ಟಾಂಡ್ ರೈಲ್ವೆ ಸ್ಟೇಷನ್ ರಾತ್ರಿ ದೇವಸ್ಥಾನ ಅಂದಾಗ. ಅವರು ಜೇಬಿ ನಿಂದ ಕರವಸ್ತ್ರ ತೆಗೆದು ಮುಖ ಮುಚ್ಚಿ ಕೊಂಡು ಅತ್ತಾಗ ವೃಷಬ್ ಅರ್ಥವಾಗಿ ಹೋಯ್ತು. ಇಬ್ಬರೂ ಹತ್ತಿರ ಬಂದು ನಾವಿಬ್ಬರೂ ಹೀಗೆ ಒಂದಾಗ್ತೀವಿ ಅಂತ ಗೊತ್ತಿರ ಲಿಲ್ಲ. ನಿನಗಾಗಿ ನಾನೂ ಬಹಳ ಕಡೆ ಹುಡುಕಿ ಸುಮ್ಮ ನಾದೆ ನೀನು ಇಲ್ಲಿಗೆ ಬರಲು ನಮ್ಮ ತಂದೆ ಕಾರಣ. ಮೂರು ದಿನದ ಹಿಂದೆಯೇ ನಿನ್ನ ವಿಷಯ ಅಪ್ಪ ತಿಳಿ ಸಿದರು ಅವರನ್ನ ನೀನು ನೋಡಿಲ್ಲ .ನೀನು ಹೇಳಿದ ನಿನ್ನ ಈ ಕಥೆಯಿಂದ ಅವರಿಗೆ ಅದು ನೀನೇ ಅಂತ ಗೊತ್ತಾಗಿದೆ ಅಂತ ಸಚಿನ್ ಹೇಳಿದ. ಐದು ವರ್ಷಗಳಲ್ಲಿ ಆದ ತನ್ನ ಬದಲಾವಣೆಯ ಕಥೆ ಹೇಳುವಾಗ ನಿನ್ನ ಹೆಂಡತಿ ಮಕ್ಕ ಳು ಎಲ್ಲಿದ್ದಾರೆ ಹೇಗಿದ್ದಾರೆ ಅಂದಾಗ ಅವರ ವಿಷಯ ಏನೂ ಗೊತ್ತಿಲ್ಲ ಅಂದ.
ತಕ್ಷಣ ಮೊದಲು ಅವರು ವಾಸವಿದ್ದ ಮನೆಗೆ ಹೋದರು ಆದರೆ ಆ ಮನೆ ಬಿಟ್ಟು ತವರು ಮನೆಗೆ ಹೋದರೆಂದು ತಿಳಿದು ಆ ಹಳ್ಳಿಗೂ ಹೋಗಿ ವಿಚಾರಿಸಿದರು.ಆಗ ಅಲ್ಲಿ ದ್ದ ಒಬ್ಬ ವ್ಯಕ್ತಿ ವೃಷಬ್ ನ ನೋಡಿ ನೀನು ನಮ್ಮ ಯಜ ಮಾನ್ ರಾಮಣ್ಣನ ಅಳಿಯ ಅಲ್ವೇ ಅಂದ. ಆಗ ಹೌದು ಎಲ್ಲಿದ್ದಾರೆ ಅವರೆಲ್ಲ.ಅವರಿದ್ದ ಮನೆಯಲ್ಲಿ ಇನ್ಯಾರೋ ಇದ್ದಾರಲ್ಲ ಅಂದಾಗ , ನೀನು
ಸಚಿನ್ ಮತ್ತು ವೃಷಬ್ ಬಾಲ್ಯ ಸ್ನೇಹಿತರು .ಇಬ್ಬರೂ ಬುದ್ಧಿವಂತರು. SSLC ವರೆಗೂ ಒಂದೇ ಶಾಲೆಯಲ್ಲಿ ಓದಿ, ನಂತರ ಬೇರೆಯಾದರೂ ವಿಧ್ಯಾಭ್ಯಾಸದ ನಂತರ ಹೇಗೊ ಮತ್ತೆ ಬೆಂಗಳೂರಲ್ಲಿ ಒಂದಾಗಿದ್ದರು. ಇಬ್ಬರ ಪಾಲಕರೂ ಹಣವಂತರಾಗಿದ್ದರು .ಪೂನಾದಲ್ಲಿ ಇಬ್ಬ ರಿಗೂ ಒಳ್ಳೆಯ ನೌಕರಿ ದೊರೆತು ಮೊದಲ ತಿಂಗಳೇ ಒಂದು ಲಕ್ಷ ರೂಪಾಯಿಗೂ ಹೆಚ್ಚು ಸಂಬಳ. ಕೆಲವು ತಿಂಗಳು PG ಯಲ್ಲಿದ್ದವರು ಒಂದು ಬಾಡಿಗೆ ಮನೆಗೆ ಹೋದರು. ಕಂಡದ್ದು ಕೊಂಡು ಬೇಕಾದ್ದು ಉಂಡು ಬಂದ ಹಣವನ್ನಲ್ಲೇ ಖರ್ಚು ಮಾಡಿ ಮಜಾ ಮಾಡ್ತಿದ್ದರು. ಈ ದಿನ ನಮ್ಮದು ನಾಳೆ ಯಾರದೋ ಅನ್ನೋ ವೈರಾಗ್ಯದ ಮಾತನ್ನೇ ಪಾಲಿಸಿಕೊಂಡು ಬಂದಿದ್ದ ಇವರಿಗೆ ಕೆಟ್ಟ ಹವ್ಯಾಸಗಳು ತಾನಾಗಿಯೇ ಮೈಗೂಡಿತ್ತು. ಎರಡು ಮೂರು ವರ್ಷಗಳ ನಂತರ ಮನೆಯವರ ಒತ್ತಡದ ಕಾರಣ ಇಬ್ಬರಿಗೂ ಮದುವೆಯೂ ಆಯ್ತು . ಮಕ್ಕಳೂ ಆಯ್ತು. ಅವರಿಗೂ ಕೇಳಿದ್ದು ಕೊಡೋಸೋದು ಹೊರ ಗಡೆ ತಿನ್ನೋದು ಊರೂರು ಸುತ್ತೋದು ಮಾಡಿ ಕೊಂಡಿ ದ್ದರು. ಸಚಿನ್ ಗೆ ಹಣ ಬೇಕಾದ್ರೆ ವೃಷಬ್ ಕೊಡ್ತಿದ್ದ , ವೃಷಬ್ ಗೆ ಬೇಕಿದ್ರೆ ಸಚಿನ್ ಕೊಡ್ತಿದ್ದ. ವಾಪಸ್ ಕೊಡ ಬೇಕಿರಲಿಲ್ಲ ಅಷ್ಟು ಅನ್ಯೋನ್ಯತೆ. ಇಬ್ಬರೂ ಹಣದ ವ್ಯವ ಹಾರ ಮಾತ್ರ ಹೆಂಡತಿ ಮಕ್ಕಳಿಗೆ ತಿಳಿಯದ ಹಾಗೆ ಬಹಳ ದಿನ ನೋಡಿ ಕೊಂಡಿದ್ದರು. ಮಕ್ಕಳು ದೊಡ್ಡವರಾಗಿ ಮನೆಯ ಖರ್ಚುಗಳು ಹೆಚ್ಚಾಗಿ ವರಮಾನ ಸಾಲದಾ ಯಿತು . ಬ್ಯಾಂಕ್ ಗಳಲ್ಲಿ ಇಬ್ಬರೂ ಸಾಲ ಮಾಡಿದರು. ಆದರೆ ಇವರ ಕ್ಲಬ್ಬು ಪಬ್ಬು ಇತರ ವೈಯ್ಯಕ್ತಿಕ ಖರ್ಚುಗ ಳನ್ನ ಕಡಿಮೆ ಮಾಡಲು ಇಬ್ಬರ ಮನಸ್ಸೂ ಒಪ್ಪಲಿಲ್ಲ.
ಬಹಳ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದರು. ಅದೇನೆಂದರೆ ತಮಗಿರುವ ಅನುಭವದಿಂದ ಸ್ವಂತ ಉದ್ಯೋಗಮಾಡಿ ಸಂಪಾದಿಸೋದು. ಆದರೆ ಅದು ಬೇರೆ ಯಾವುದಾದರೂ ಊರಲ್ಲಿ .ಇದನ್ನ ಇಬ್ಬರೂ ಅವರ ಹೆಂಡತಿ ಮಕ್ಕಳಿಗೆ ತಿಳಿಸಿ ಎರಡು ವರ್ಷದಲ್ಲಿ ನಾವು ಹೆಚ್ಚು ಹಣ ಆಸ್ತಿ ಎಲ್ಲಾ ಸಂಪಾದನೆ ಮಾಡಿ ಬರ್ತೀವಿ ಆಮೇಲೆ ನೀವು ಇದಕ್ಕಿಂತಲೂ ಹೆಚ್ಚು ಸುಖ ಕಾಣಬಹುದು ಎಂದಾಗ ಇಬ್ಬರೂ ಸಂತೋಷದಿಂದ ಒಪ್ಪಿ ಅಷ್ಟೊಂದು ಹಣ ಎರಡು ವರ್ಷದಲ್ಲಿ ಸಂಪಾದನೆ ಮಾಡೋದಾದ್ರೆ ಈ ದಿನವೇ ಹೋಗಿ ಅಂತ ಕಳುಹಿಸಿ ಕೊಟ್ಟರು .
ಮನೆ ಬಿಟ್ಟು ಬೇರೊಂದು ಊರಿಗೆ ಬಂದರು.ಹೋಟಲ್ ರೂಮ್ ನಲ್ಲಿದ್ದು ದಿನವೂ ಹಲವಾರು ಪ್ರಾಜೆಕ್ಟ್ ಗಳ ಬಗ್ಗೆ ಆಲೋಚನೆ ಮಾಡಿದರು. ಆದರೆ ಯಾವುದೂ ಸರಿ ಹೊಂದದೇ ಇದ್ದಾಗ ಏನು ಮಾಡೋದೋ ಅಂತ ಯೋಚನೆ ಮಾಡ್ತಾ ಒಂದು ವಾರ ಕಳೆದು ಹೋಯ್ತು. ತಂದಿದ್ದ ಹಣ ಖರ್ಚಾಗ್ತಾ ಬಂತು. ಸಚಿನ್ ವೃಷಬ್ ಗಿಂತಲೂ ಸ್ವಲ್ಪ ಬುದ್ದಿವಂತ. ಸಚಿನ್ ಹೇಳ್ದ , ಇದ್ದ ಒಳ್ಳೆ ಕೆಲಸ ಬಿಟ್ಟು ಬಂದಿದ್ದೇವೆ ಮನೆಯಲ್ಲಿ ಹೆಂಡತಿ ಮಕ್ಕಳು ಬೇರೆ. ನಾವು ಇಬ್ಬರೂ ಸೇರಿ ಏನೂ ಮಾಡಲು ಆಗ್ತಿಲ್ಲ. ಎರಡು ವರ್ಷ ಅನ್ನೋದು ಬೇಗ ಬಂದು ಬಿಡುತ್ತೆ. ಒಂದು ಕೆಲಸ ಮಾಡೋಣ ಇಬ್ಬರೂ ಇಲ್ಲಿಂದ ಬೇರೆ ಬೇರೆ ಊರಿಗೆ ಹೋಗಿ ಸ್ವಲ್ಪ ವಿಭಿನ್ನ ರೀತಿಯೇ ಯೋಚ ನೆ ಮಾಡಿ ದುಡಿಯೋಣ. ಎರಡು ವರ್ಷಗಳ ನಂತರ ಮತ್ತೆ ಒಂದಾಗೋಣ ಅಂದಾಗ ಇದೂ ಒಳ್ಳೆಯ ಉಪಾ ಯ ಅಂತ ಅಲ್ಲಿಂದ ಸಚಿನ್ ಮುಂಬೈಗೂ ,ವೃಷಬ್ ದೆಹಲಿಗೂ ಹೊರಟರು. ಈಗ ಕೈಲಿದ್ದ ಹಣವೂ ಖಾಲಿ ಯಾಗಿ ಈಗ ದುಡಿಯಲೇ ಬೇಕಾದ ಅನಿವಾರ್ಯತೆ ಇಬ್ಬರಿಗೂ. ಸಚಿನ್ ಮಾತಿನಲ್ಲಿ ನಿಸ್ಸೀಮ. ಕಲ್ಲು ಬಂಡೆ ಯನ್ನ ಬೇಕಾದರೂ ಮಾತನಾಡಿಸುವಷ್ಟು ಚಾಣಾಕ್ಷ. ಒಂದು ಖಾಸಗಿ ಕಂಪನಿಯ ಮುಖ್ಯಸ್ಥನ ಬಳಿ ಹೋಗಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ಕಾರ್ಮಿಕರಿಗೆ ಮನವರಿಕೆ ಮಾಡಿಕೊಡಬಲ್ಲೆ ಅವರನ್ನ ಒಂದು ತಿಂಗಳಲ್ಲಿ ಬದಲಾ ಯಿಸಬಲ್ಲೆ ಎಂದಾಗ ಮೂರು ತಿಂಗಳು ಮಾತ್ರ ಸಮಯ ಕೊಟ್ಟು ಅಷ್ಟರಲ್ಲಿ ಬದ ಲಾವಣೆ ಕಂಡರೆ ಮಾತ್ರ ಮುಂದುವರೆಸುವುದಾಗಿ ಹೇಳಿದರು. ಅದಕ್ಕೆ ಒಪ್ಪಿ ಆ ಕಂಪನಿಯ ಕಾರ್ಮಿಕರಿಗೆ ಹಗಲು ರಾತ್ರಿ ತರಗತಿಗಳನ್ನು ನಡೆಸಿ ಕಾರ್ಮಿಕ ಮತ್ತು ಮಾಲೀಕರ ಮಧ್ಯೆ ಒಂದು ಕೊಂಡಿಯಾದ.
ಎರಡೂ ಕಡೆ ಇದ್ದ ಹಲವಾರು ತೊಂದರೆ ಅನಾನುಕೂಲತೆ ತೊಡಕುಗಳು ತಾನಾಗಿ ಪರಿಹಾರ ಕಂಡು ವೈಮನಸ್ಸು ಇಲ್ಲದಾಯ್ತು. ಈ ಸಂಗತಿ ಇತರ ಎರಡು ಕಂಪನಿ ಮಾಲೀಕರಿಗೂ ತಿಳಿದು ಇವನ ಸಹಾ ಯ ಪಡೆಯಲು ಆಸಕ್ತಿ ತೋರಿಸಿದರು .ಎರಡು ವರ್ಷಗ ಳ ನಂತರ ಬಿಡುವಿಲ್ಲದೆ ದುಡಿಯುವ ಸಚಿನ್ ಗೆ ನಷ್ಟ ದಲ್ಲಿದ್ದ ಒಂದು ದೊಡ್ಡ ಹಡಗು ನಿರ್ಮಾಣ ಕಂಪನಿ ಯಿಂದ ಪಾಲುದಾರನಾಗಲು ಆಹ್ವಾನ ಬಂತು .ಇವನ ಬುದ್ದಿವಂತಿಕೆಯಿಂದ ಆ ಕಂಪನಿ ಸಹಾ ಬೇಗ ಲಾಭ ಗಳಿಸುವಂತಾಯ್ತು. ಅಲ್ಲಿಂದ ಸಚಿನ್ ಮುಟ್ಟಿದ್ದೆಲ್ಲಾ ಚಿನ್ನ ಆಗ್ತಾ ಹೋಯ್ತು. ಎರಡು ವರ್ಷಗಳ ನಂತರ ಹೆಂಡತಿ ಮಕ್ಕಳನ್ನ ತಾನಿದ್ದ ಕಡೆ ಕರೆಸಿ ಕೊಂಡ. ಈಗ ಸಚಿನ್ ಗೆ ಮಾತನಾಡಲೂ ಸಮಯವಿಲ್ಲದಷ್ಟು ಕೈ ತುಂಬಾ ಕೆಲಸ. ಅವನ ಆತ್ಮೀಯ ಸ್ನೇಹಿತನ ಬಗ್ಗೆ ಯೋಚನೆ ಮಾಡುವುದಕ್ಕೂ ಸಮಯವಿಲ್ಲ. ಆದರೆ ಅವನ ಹೆಂಡತಿ ಮಾತ್ರ ವೃಷಬ್ ನ ಹೆಂಡತಿ ಮಕ್ಕಳ ಬಗ್ಗೆ ತಿಳಿದು ಕೊಳ್ಳಲು ಪ್ರಯತ್ನ ಮಾಡ್ತಾ ಇದ್ದಳಾದರೂ ಎಲ್ಲಿದ್ದಾರೆಂದೇ ತಿಳಿಯಲೇ ಇಲ್ಲ.
ವೃಷಬ್ ಸಚಿನ್ ಗೆ ತದ್ವಿರುದ್ಧ . ಒಂದು ಹೊತ್ತು ಊಟ ಕ್ಕೂ ಪರದಾಟ. ಹಸಿವಿನ ಬೆಲೆ ಈಗ ಗೊತ್ತಾಯ್ತು. ಆಗ ನೀರಿನಂತೆ ಖರ್ಚು ಮಾಡಿದ ಹಣದ ನಿಜವಾದ ಬೆಲೆ ಈಗ ತಿಳಿದು ಕಣ್ಣೀರಿಟ್ಟ. ಹೆಂಡತಿ ಮಕ್ಕಳನ್ನು ನೆನೆದು ದುಃಖ ಪಟ್ಟ. ಇರಲು ನೆಲೆ ಇಲ್ಲ. ಕೂಲಿ ಮಾಡಲು ಶಕ್ತಿ ಇಲ್ಲ. ಉಳಿದ ಒಂದೇ ಮಾರ್ಗ ಭಿಕ್ಷೆ. ಒಂದು ದೇವಸ್ಥಾನ ದ ಮುಂದೆ ಕೂತಾಗ ಬೇರೆ ಭಿಕ್ಷುಕರು ಓಡಿಸಿದರು. ಆ ಸಮಯಕ್ಕೆ ಸರಿಯಾಗಿ ಕಾರಿನಲ್ಲಿ ಅಲ್ಲಿಗೆ ಬಂದ ಒಬ್ಬ ವಯಸ್ಸಾದ ವ್ಯಕ್ತಿ ಇವನನ್ನು ನೋಡಿ ಮಾತನಾಡಿಸಿ ದಾಗ ಎಲ್ಲಾ ವಿಷಯ ಹೇಳಿಕೊಂಡ. ಗೋಪಿಯನ್ನ ಮನೆಗೆ ಕರೆದು ಕೊಂಡು ಹೋದರು. ಹೊಟ್ಟೆ ತುಂಬಾ ಊಟ ಹಾಕಿ, ಮನೆಯಲ್ಲಿ ಎರಡು ಮೂರು ದಿನ ಇರುವಂತೆ ಹೇಳಿದರು. ಮೊದಲು ನನಗೆ ಒಂದು ಕೆಲಸ ಕೊಡಿಸಿ. ಹೀಗೆ ಸುಮ್ಮನೆ ಕೂಡಲು ನನಗೆ ಕಷ್ಟ ಅಂದಾಗ ನಿನ್ನ ಅನುಭವಕ್ಕೆ ತಕ್ಕ ಕೆಲಸ ಕೊಡಿಸುತ್ತೇನೆ ಧೈರ್ಯ ವಾಗಿರು ಎಂದರು. ಮಾರನೆ ದಿನ ಅವರ ಕಾರಲ್ಲಿ ಪಕ್ಕದ ಊರಿನ ಒಂದು ಕಂಪನಿಗೆ ಕರೆದು ಕೊಂಡು ಹೋದರು. ಅಲ್ಲಿನ ಮ್ಯಾನೇಜರ್ ಗೆ ಇವನ ಬಗ್ಗೆ ಎಲ್ಲಾ ತಿಳಿಸಿದರು. ಇಂತಹ ವ್ಯಕ್ತಿ ನಮಗೂ ಅವಶ್ಯಕತೆ ಇದೆ ಅಂತ ಹೇಳಿ ಮಾರನೆ ದಿನದಿಂದ ಕೆಲಸಕ್ಕೆ ಬರಲು ಹೇಳಿದರು. ಇಲ್ಲಿ ಹೊಸದಾಗಿ ಸೇರಿದವರು ಆ ಕಂಪನಿ ಡೈರೆಕ್ಟರ್ ಗಳನ್ನು ಕಾಣ ಬೇಕಿತ್ತು. ವೃಷಬ್ ಸಹಾ ಅವರ ಚೇಂಬರ್ ಹೊರ ಗೆ ಕಾದಿದ್ದ. ವ್ಯಕ್ತಿ ಕಾರಿನಿಂದ ಇಳಿದು ನೇರವಾಗಿ ಚೇಂ ಬರ್ ಒಳಗೆ ಹೋದರು. ಈ ವ್ಯಕ್ತಿಯನ್ನ ಎಲ್ಲೋ ನೋಡಿ ದ್ದೇನೆ ಆದರೆ ನೆನೆಪಿಲ್ಲವಲ್ಲ ಪ್ರಪಂಚದಲ್ಲಿ ಒಬ್ಬರಂತೆ ಏಳು ಜನ ಇರ್ತಾರಂತೆ ಅಂತ ಯಾರೋ ಹೇಳಿದ್ದು ನೆನಪಾಗಿ ಸುಮ್ಮನಾದ. ಅಷ್ಟರಲ್ಲ .ಮಿಸ್ಟರ್ ವೃಷಬ್ ಅಂತ ಒಳಗಡೆಯಿಂದ ಕೂಗಿದಾಗ ಒಳಗೆ ಹೋದ. ಇವ ನ ಫೈಲ್ ನೋಡ್ತಾ ತಲೆ ಬಗ್ಗಿಸಿಕೊಂಡೇ ಎದುರಿಗಿದ್ದ ಕುರ್ಚಿಯ ಕಡೆ ಕೈ ತೋರಿಸಿ ದಾಗಿ ಕುಳಿತು ಕೊಂಡ. ಕಳೆದ ಐದು ವರ್ಷಗಳು ಎಲ್ಲಿ ಕೆಲಸ ಮಾಡಿದ್ದೀರಿ ಅಂತ ತಲೆ ಎತ್ತದೆ ಕೇಳಿದಾಗ ಹಗಲು ಬಸ್ ಸ್ಟಾಂಡ್ ರೈಲ್ವೆ ಸ್ಟೇಷನ್ ರಾತ್ರಿ ದೇವಸ್ಥಾನ ಅಂದಾಗ. ಅವರು ಜೇಬಿ ನಿಂದ ಕರವಸ್ತ್ರ ತೆಗೆದು ಮುಖ ಮುಚ್ಚಿ ಕೊಂಡು ಅತ್ತಾಗ ವೃಷಬ್ ಅರ್ಥವಾಗಿ ಹೋಯ್ತು. ಇಬ್ಬರೂ ಹತ್ತಿರ ಬಂದು ನಾವಿಬ್ಬರೂ ಹೀಗೆ ಒಂದಾಗ್ತೀವಿ ಅಂತ ಗೊತ್ತಿರ ಲಿಲ್ಲ. ನಿನಗಾಗಿ ನಾನೂ ಬಹಳ ಕಡೆ ಹುಡುಕಿ ಸುಮ್ಮ ನಾದೆ ನೀನು ಇಲ್ಲಿಗೆ ಬರಲು ನಮ್ಮ ತಂದೆ ಕಾರಣ. ಮೂರು ದಿನದ ಹಿಂದೆಯೇ ನಿನ್ನ ವಿಷಯ ಅಪ್ಪ ತಿಳಿ ಸಿದರು ಅವರನ್ನ ನೀನು ನೋಡಿಲ್ಲ .ನೀನು ಹೇಳಿದ ನಿನ್ನ ಈ ಕಥೆಯಿಂದ ಅವರಿಗೆ ಅದು ನೀನೇ ಅಂತ ಗೊತ್ತಾಗಿದೆ ಅಂತ ಸಚಿನ್ ಹೇಳಿದ. ಐದು ವರ್ಷಗಳಲ್ಲಿ ಆದ ತನ್ನ ಬದಲಾವಣೆಯ ಕಥೆ ಹೇಳುವಾಗ ನಿನ್ನ ಹೆಂಡತಿ ಮಕ್ಕ ಳು ಎಲ್ಲಿದ್ದಾರೆ ಹೇಗಿದ್ದಾರೆ ಅಂದಾಗ ಅವರ ವಿಷಯ ಏನೂ ಗೊತ್ತಿಲ್ಲ ಅಂದ.
ತಕ್ಷಣ ಮೊದಲು ಅವರು ವಾಸವಿದ್ದ ಮನೆಗೆ ಹೋದರು ಆದರೆ ಆ ಮನೆ ಬಿಟ್ಟು ತವರು ಮನೆಗೆ ಹೋದರೆಂದು ತಿಳಿದು ಆ ಹಳ್ಳಿಗೂ ಹೋಗಿ ವಿಚಾರಿಸಿದರು.ಆಗ ಅಲ್ಲಿ ದ್ದ ಒಬ್ಬ ವ್ಯಕ್ತಿ ವೃಷಬ್ ನ ನೋಡಿ ನೀನು ನಮ್ಮ ಯಜ ಮಾನ್ ರಾಮಣ್ಣನ ಅಳಿಯ ಅಲ್ವೇ ಅಂದ. ಆಗ ಹೌದು ಎಲ್ಲಿದ್ದಾರೆ ಅವರೆಲ್ಲ.ಅವರಿದ್ದ ಮನೆಯಲ್ಲಿ ಇನ್ಯಾರೋ ಇದ್ದಾರಲ್ಲ ಅಂದಾಗ , ನೀನು ಮನುಷ್ಯನೇನಪ್ಪ ಎರಡು ವರ್ಷ ದುಡಿದು ಬರ್ತೀನಿ ಅಂತ ಹೋದೋನು ಪತ್ತೇನೆ ಇಲ್ವಂತೆ. ಕಾಗದ ಫೋನು ಏನೂ ಇಲ್ಲದೇ ಅವರು ಏನಂತ ತಿಳೀಬೇಕು..ಅವರಿಗೆ ಜೀವನಕ್ಕೆ ಏನಾದರೂ ಒಂದು ವ್ಯವಸ್ಥೆ ಮಾಡಿ ಹೋಗಬೇಕು ಅನ್ನೊ ಪರಿಜ್ಞಾನ ಬೇಡವೇ ಪಾಪ ಆ ಹೆಂಗಸು ಕಣ್ಣೀರು ಹಾಕ್ಕೊಂಡು ಇಲ್ಲಿಗೆ ಬಂದು ಒಂದು ತಿಂಗಳಲ್ಲಿ ನಮ್ಮ ರಾಮಣ್ಣ ಅದೇ ಯೋಚನೆಗೆ ತೀರ್ಕೊಂಡ. ಇನ್ನೇನು ಮಾಡ್ತಾಳೆ ಇಬ್ಬರು ಹೆಣ್ಣು ಮಕ್ಕಳನ್ನ ಇಟ್ಕೊಂಡು .ವರ್ಷ ಆಯಿತು ಮೂರು ಜನರೂ ಇದೇ ಭಾವೀಗೆ ಬಿದ್ದರು ಅಂತ ಹೇಳಿ ಆ ನೀರಿ ಲ್ಲದ ಹಳೇ ಭಾವಿ ಕಡೆ ಕೈ ತೋರಿಸಿದ. ಇಬ್ಬರೂ ಅಲ್ಲೇ ಅಳುತ್ತಾ ನಿಂತರು. ತಕ್ಷಣ ಏನಾಯ್ತೋ ವೃಷಬ್ ಓಡಿ ಹೋಗಿ ಅದೇ ಭಾವಿಗೆ ಹಾರಿದ. ಉಳಿಸಲು ಬಹಳ ಪ್ರಯತ್ನ ಮಾಡಿದರೂ ತಲೆಗೆ ಹೆಚ್ಚು ಪೆಟ್ಟಾಗಿದ್ದ ಕಾರಣ ಸಾಧ್ಯವಾಗದೆ ಪ್ರಾಣ ಬಿಟ್ಟ. ಇದಕ್ಕೆಲ್ಲಾ ನಮ್ಮ ದುರಾಸೆ ಕಾರಣ ಅಂತ ಒಬ್ಬನೇ ಅಳುತ್ತಾ ವಾಪಸ್ ಹೋದ ಸಚಿನ್.
ಮನುಷ್ಯನೇನಪ್ಪ ಎರಡು ವರ್ಷ ದುಡಿದು ಬರ್ತೀನಿ ಅಂತ ಹೋದೋನು ಪತ್ತೇನೆ ಇಲ್ವಂತೆ. ಕಾಗದ ಫೋನು ಏನೂ ಇಲ್ಲದೇ ಅವರು ಏನಂತ ತಿಳೀಬೇಕು..ಅವರಿಗೆ ಜೀವನಕ್ಕೆ ಏನಾದರೂ ಒಂದು ವ್ಯವಸ್ಥೆ ಮಾಡಿ ಹೋಗಬೇಕು ಅನ್ನೊ ಪರಿಜ್ಞಾನ ಬೇಡವೇ ಪಾಪ ಆ ಹೆಂಗಸು ಕಣ್ಣೀರು ಹಾಕ್ಕೊಂಡು ಇಲ್ಲಿಗೆ ಬಂದು ಒಂದು ತಿಂಗಳಲ್ಲಿ ನಮ್ಮ ರಾಮಣ್ಣ ಅದೇ ಯೋಚನೆಗೆ ತೀರ್ಕೊಂಡ. ಇನ್ನೇನು ಮಾಡ್ತಾಳೆ ಇಬ್ಬರು ಹೆಣ್ಣು ಮಕ್ಕಳನ್ನ ಇಟ್ಕೊಂಡು .ವರ್ಷ ಆಯಿತು ಮೂರು ಜನರೂ ಇದೇ ಭಾವೀಗೆ ಬಿದ್ದರು ಅಂತ ಹೇಳಿ ಆ ನೀರಿ ಲ್ಲದ ಹಳೇ ಭಾವಿ ಕಡೆ ಕೈ ತೋರಿಸಿದ. ಇಬ್ಬರೂ ಅಲ್ಲೇ ಅಳುತ್ತಾ ನಿಂತರು. ತಕ್ಷಣ ಏನಾಯ್ತೋ ವೃಷಬ್ ಓಡಿ ಹೋಗಿ ಅದೇ ಭಾವಿಗೆ ಹಾರಿದ. ಉಳಿಸಲು ಬಹಳ ಪ್ರಯತ್ನ ಮಾಡಿದರೂ ತಲೆಗೆ ಹೆಚ್ಚು ಪೆಟ್ಟಾಗಿದ್ದ ಕಾರಣ ಸಾಧ್ಯವಾಗದೆ ಪ್ರಾಣ ಬಿಟ್ಟ. ಇದಕ್ಕೆಲ್ಲಾ ನಮ್ಮ ದುರಾಸೆ ಕಾರಣ ಅಂತ ಒಬ್ಬನೇ ಅಳುತ್ತಾ ವಾಪಸ್ ಹೋದ ಸಚಿನ್.