ಮಹಾಚೇತನ
ಮಹಾಚೇತನ
ಹೆತ್ತ ತಾಯಿಯ ಮಡಿಲು ತೊರೆದಿರಿ
ಜಗದ ಉದ್ಧಾರಕೆ ಹೆಗಲು ಕೊಟ್ಟಿರಿ
ಸಿದ್ಧಾರೂಢರ ಮಾರ್ಗದಲಿ ನಡೆದಿರಿ
ಆಧ್ಯಾತ್ಮಿಕ ಸಾಧನೆಯನು ಮಾಡಿದಿರಿ
ಲೋಕ ಕಲ್ಯಾಣಕ್ಕಾಗಿ ಅವತರಿಸಿದಿರಿ
ಹಾನಗಲ್ ಮಠದ ಪೀಠಾಧಿಪತಿಯಾದಿರಿ
ಅನಕ್ಷರತೆ ತೊಲಗಿಸಲು ಶಾಲೆಗಳ ತೆರೆದಿರಿ
ತತ್ವಜ್ಞಾನದ ಅರಿವು ಮಕ್ಕಳಲಿ ತುಂಬಿದಿರಿ
ಧೀನ ದುರ್ಬಲರಿಗೆ ನೆರಳಾಗಿ ಬದುಕಿದಿರಿ
ಅಂಧರ ಬಾಳಿನ ಅಂಧಕಾರವ ಅಳಿಸಿದಿರಿ
ಸಂಗೀತ ಸಾಹಿತ್ಯ ಲೋಕವನು ಬೆಳಗಿದಿರಿ
ಸರ್ವ ಕ್ಷೇತ್ರದಲ್ಲೂ ಹೆಸರನು ಸಾಧಿಸಿದಿರಿ
ಸಮಾಜಮುಖಿ ಕಾರ್ಯವ ಮಾಡಿದಿರಿ
ಜನರ ಸೇವೆಯಲ್ಲಿಯೇ ಶಿವನ ಕಂಡಿರಿ
ಕುಮಾರ ಶಿವಯೋಗಿ ಗುರುಗಳಾದಿರಿ
ಭಕ್ತರ ಮನದಲ್ಲಿ ದೇವರಾಗಿ ನೆಲಸಿದಿರಿ