ಕೃಷ್ಣ ಕುಟೀರ-22 ಮೋಸಕ್ಕೆ ಪ್ರತಿಫಲ
ಕೃಷ್ಣ ಕುಟೀರ-22 ಮೋಸಕ್ಕೆ ಪ್ರತಿಫಲ
ಅಂದು ವಿಜೇಂದ್ರ ಶೇವ್ ಮಾಡ್ತಾ ಇದ್ದ ಆವಾಗ ನಾನ ಬಂದು ವಿಜೇಂದ್ರ ನ ಕುರಿತು
ನಾನ : ದನಿ ಹಿಂದಿನ ವಾರ ತಾವು ನನಗೆ ನಿಮ್ಮ ಕಾರನ್ನು ಕೊಡ್ತೀನಿ ಅಂತ ಹೇಳಿದ್ರಿ
ವಿಜೇಂದ್ರ : ಹೌದು ಹೇಳಿದೆ ಸರಿಯಾದ ಸಮಯಕ್ಕೆ ಬಂದಿದಿಯ ನಾನಾ ಇಲ್ಲದಿದ್ರೆ ಸುಮ್ನೆ ಬ್ಲೇಡು ವೆಸ್ಟ್ ಆಗ್ತಿತ್ತು ಕಾರ್ ತಗೊಂಡು ಹೋಗಂತೆ ಆದರೆ ಅದರ ಮೊದಲು ಒಂದು ಕಥೆ ಹೇಳ್ತೀನಿ ವಿಜಯೇಂದ್ರ ಬಲ ಕೈಯಲ್ಲಿ razor ಹಿಡಿದು ಎಡ ಕೈಯನ್ನು ನಾನಾ ಹೆಗಲ ಮೇಲೆ ಹಾಕಿ ನೀನು ಚಂಗೀಸ್ ಖಾನ್ ಬಗ್ಗೆ ಕೇಳಿದೆ.
ನಾನಾ ಇಲ್ಲ ಅಂತ ತನ್ನ ತಲೆಯನ್ನು ಅಲ್ಲಾಡಿಸಿದನು
ವಿಜಯೇಂದ್ರ : ಚಂಗೀಸ್ ಖಾನ್ ಒಬ್ಬ ವಿಶ್ವವಿಜಯತ ರಾಜ, ಭೂಮಿಯ ಅರ್ಧ ಪಾಲಷ್ಟು ಅವನು ವಶಪಡಿಸಿಕೊಂಡಿದ್ದ ಆತನು ಯಾವುದೋ ಒಂದು ಯುದ್ಧ ಸೋತಿಲ್ಲ ಆದರೆ ಅವನಿಗೆ ಒಂದು ಆಸೆ ಇತ್ತು ತಾನು ಸತ್ತಾಗ ಅವನನ್ನು ಯಾರಿಗೂ ತಿಳಿಯದೆ ಇರದ ಜಾಗದಲ್ಲಿ ಹೂತಾಕಬೇಕಂತ ಅವನ ಬಯಕೆ ವಿತ್ತು ಅದಕ್ಕೆ ಆತನು ಸತ್ತಾಗ ಅವನನ್ನು ಹೂತ ಅಷ್ಟು ಮಂದಿಯನ್ನು ಚಂಗೀಸ್ ಕಾಂಗ ಸೈನಿಕರು ಸಾಯಿಸ್ಬಿಟ್ರು ಆದರೆ ಅದೇ ಸೈನಿಕರು ಮರಳುವಾಗ ಅವರೆಲ್ಲರನ್ನು ಮತ್ತೊಂದು ಚಂಗೀಸ್ ಖಾನ್ ಸೈನ್ಯ ಪಡೆ ಸಾಯಿಸಿದ್ದರು ಯಾಕೆ ಗೊತ್ತಾ
ನಾನ : ಹೌದು ಯಾಕೆಂದರೆ ಆ ಸೈನಿಕರಿಗೆ ಚಂಗೀಸ್ ಖಾನ್ ಸಮಾಧಿ ತಿಳಿದಿತ್ತು ಆವಾಗ ವಿಜಯೇಂದ್ರ ತನ್ನ ಕೈಯಲ್ಲಿದ್ದ ಬ್ಲೇಡ್ ಇಂದ ನಾನನ ಕುತ್ತಿಗೆ ಕೊಯ್ದನು ನಾನಾ ಅಲ್ಲೇ ಸತ್ತು ಬಿದ್ದ
ಅದೇ ತರ ಸೌಜನ್ ಕೊಲೆ ರಹಸ್ಯದ ಬಗ್ಗೆ ನಿನಗೊಬ್ಬನಿಗೆ ತಿಳಿದಿದೆ ನಿನ್ನನೆ ಮುಗಿಸಿದರೆ ಅದೊಂದು ರಹಸ್ಯವೇ ಆಗಿರುತ್ತದೆ, ಯು ಬೆಗ್ಗರ್ ನಿನಗೆ ರೋಲ್ಸ್ ರಾಯ್ಸ್ ಕಾರು ಬೇಕಾ ನಿನ್ನ ಕಿಮತ್ತು ಈ ಶೇವು ಮಾಡಿದ ಬ್ಲೇಡಿನಷ್ಟೇ
ಅದನ್ನು ನೋಡಿದ ಕೂಕುಗೆ ತುಂಬ ದುಃಖವಾಯಿತು ಆದರೆ ತಾನು ಬಾಯಿ ತೆಗೆದರೆ ತನ್ನದು ಗತಿ ನಾನತರಾಗುವುದೆಂದು ಬಾಯಿ ಮುಚ್ಕೊಂಡಿದ್ದನು.
ವಿಜಯೇಂದ್ರ ತನ್ನ ಆಳುಗಳನ್ನು ಕುರಿತು ಇವನನ್ನು ಯಾರು ತಿಳಿಯದ ಪ್ರದೇಶದಲ್ಲಿ ಹೂತು ಹಾಕಿ ಹಾಗೂ ಪೊಲೀಸ್ಗೆಗ ಒಂದು ಇವನ ಮೇಲೆ ಮಿಸ್ಸಿಂಗ್ ಕಂಪ್ಲೇಂಟ್ ಕೂಡ ಕೊಡಿ
ಜಯಂದ್ರ : ಮಿಸ್ಸಿಂಗ್ ಕಂಪ್ಲೇಂಟ್ನ್ಯಾಕೆ
ವಿಜಯೇಂದ್ರ : ಸೌಜನ್ಯ ಕೊಲೆಯ ಸಾಕ್ಷಿ ಇವನೇಯಾಗಿದ್ದ ಇವನನ್ನೇ ಜಗನ್ನಾಥ ಅಪಹರಿಸಿದನೆಂದು ಅವರ ಮೇಲೆ ಕಂಪ್ಲೇಂಟ್ ಕೊಡೋಣ
ಆವಾಗ ಅಲ್ಲಿಗೆ ನಿಂಗಿ ಮತ್ತು ಸುಕೇಶ ಬಂದ್ರು
ನಿಂಗೆ : ವಿಜಯೇಂದ್ರ ಇನ್ನು ನೀನು ಇದನ್ನು ಜಗನ್ನಾಥ ಮಾಡಿದನೆಂದರೆ ಯಾರು ನಂಬಲ್ಲ
ನಿಂಗಿ :ಯಾಕೆಂದ್ರೆ ನಿನ್ನೆ ರಾತ್ರಿ ಜಗನ್ನಾಥನಿಗೆ ಲಕ್ಕವ ಹೊಡೆದಿದ್ದು ಡಾಕ್ಟರ್ ಡಿಸೋಜಾ ಹೇಳಿದಾಗೆ ಇನ್ನು ಅವನು ಕೆಲವೇ ದಿನ ಈ ಭೂಮಿಯಲ್ಲಿ ಇರುವುದು
ಅದನ್ನು ಕೇಳಿ ಜಯಂದ್ರನ ಗಟ್ಟಿಯಾಗಿ ನಗಲು ಪ್ರಾರಂಭಿಸಿದರು
ಜಯಂದ್ರ : ಇವತ್ತಿಗೆ ನನ್ನ ಕನಸು ನನಸಾಯಿತು ಆ ಕೃಷ್ಣ ಕುಟೀರ ಮನೆಯವರೆಲ್ಲ ನಾಶವಾಗಿ ಹೋದರು ಇವತ್ತು ನನಗೆ ತುಂಬಾ ಸಂತೋಷದ ದಿನ ನನಗೆ ಮಾಡಿರುವ ಅಪಮಾನವನ್ನು ಅವರಿಗೆ ತಿರುಗಿ ,ತಿರುಗಿಕೊಟ್ಟು ಅವರನ್ನು ನಾನು ಇಂಚಿಂಚಾಗಿ ಸಾಯಿಸಿದ್ದೀನಿ ಜಯಂದ್ರ ಆಕಾಶವನ್ನು ನೋಡುತ್ತಾ ಅಪ್ಪ ನಿನ್ನ ಮಕ್ಕಳು ನಿನ್ನ ಆಸೆಯನ್ನು ಪೂರೈಸಿದ್ದೇವೆ ಶಭಾಷ್ ತಮ್ಮ ಶಭಾಷ್ ಎಂದು ವಿಜಯೇಂದ್ರನ ಹೆಗಲ ಮೇಲೆ ಕೈ ಇಟ್ಟು ಮತ್ತು ಆತನನ್ನು ತಬ್ಬಿಕೊಂಡನು.
ವಿಜೇಂದ್ರ ಏನು ಹೇಳದೆ ಮೌನವಾಗಿದ್ದ
ನಿಂಗಿ : ನಿಮ್ಮ ಅಣ್ಣ ತಮ್ಮಂದಿರ ಪ್ರೀತಿ ವಾತ್ಸಲ್ಯ ಆಮೇಲೆ ಮೊದಲು ಪತ್ರ ತಗೊಂಡು ನಮಗೆ ಕೊಡಬೇಕಾದ ಹಣವನ್ನು ಕೊಡಿ ಲೆಕ್ಕ ಹಾಕಿದರೆ ಕಮ್ಮಿ ಎಂದರೆ 25 ಕೋಟಿ ಆಗಿರಬಹುದು
ಆವಾಗ ವಿಜೇಂದ್ರ ಕೊಡ್ತೀನಿ ನಿನಗೆ 25 ಕೋಟಿ ಅಲ್ಲ ಅದಕ್ಕಿಂತ ಜಾಸ್ತಿಯೇ ಕೊಡಬೇಕು ಎಂದು ಹೇಳಿ ತನ್ನ ಜೇಬಿನಿಂದ ರಿವಾಲ್ವರ್ ತೆಗೆದು ನಿಂಗಿಗೆ ಶೂಟ್ ಮಾಡ್ದ
ವಿಜೇಂದ್ರ : ಒಬ್ಬ ಜೀತದಾಳು ಮಗಳನ್ನು ತನ್ನ ಸ್ವಂತ ಮಗಳಂತೆ ಸಾಕಿದ ಅಂತ ದೇವರಂತ ವಿಶ್ವನಾಥ್ವರಿಗೆ ಹಾಗೂ ನಿನ್ನನ್ನು ಸ್ವಂತ ತಂಗಿಗಿಂತ ಹೆಚ್ಚಾಗಿ ನೋಡುತ್ತಿರುವ ಜಗನ್ನಾಥನಿಗೆ ನೀನು ಆಗಲಿಲ್ಲ ಹಾಗಾದರೆ ಅವಶ್ಯವಿದ್ದರೆ ನಮ್ಮ ಬುಡಕ್ಕೆನೇ ಬೆಂಕಿ ಇಡುವಂತವಳು ನೀನು ನಿನ್ನಂತವರು ಈ ಭೂಮಿಯಲ್ಲಿ ಬದುಕುವುದೇ ಬಾರ
ಆವಾಗ ಸುಕೇಶ ಓಡಿಬಂದು ವಿಜೇಂದ್ರ ಕಾಲಿಗೆ ಬಿದ್ದನು.
ಸುಕೇಶ : ನನ್ನನ್ನು ಬಿಟ್ಟುಬಿಡಿ
ವಿಜಯೇಂದ್ರ : ಆಯ್ತು ಬಿಟ್ಟುಬಿಡುತ್ತೇನೆ ಆದರೆ ನೀನು ನಾನು ಹೇಳಿದಾಗೆ ಮಾಡಬೇಕು
ಸುಕೇಶ : ಏನು ಬೇಕಾದರೂ ಮಾಡ್ತೀನಿ ನೀವು ಹೇಳಿದಾಗೆ ಮಾಡ್ತೀನಿ ಆದರೆ ನನ್ನನ್ನು ಮಾತ್ರ ಸಾಯಿಸಬೇಡಿ
ವಿಜೇಂದ್ರ : ಆಯ್ತು ಸಾಯಿಸಲ್ಲ ಆದರೆ ತಕ್ಷಣ ಜಗನ್ನಾಥನ ಮನೆಗೆ ಹೋಗಿ ಯಾವುದೋ ಒಂದು ಕಾರಣಕೊಟ್ಟು ನೀನು ಮತ್ತೆ ನಿಂಗಿ ಯಾವುದೋ ಒಂದು ಅರ್ಜೆಂಟ್ ಕೆಲಸದಿಂದ ಹೊರಗಡೆ ಊರಿಗೆ ಹೋಗ್ತಿವಿ ಅಂತ ಹೇಳು.
ಸುಕೇಶ : ಆಯ್ತು ಹೇಳ್ತೀನಿ ನೀವು ಹೇಳಿದ ಹಾಗೆ ಮಾಡ್ತೀನಿ
ಸುಕೇಶ ಹೋದ ನಂತರ ವಿಜೇಂದ್ರ ಜಯಂದ್ರನನ್ನು ಕುರಿತು ಜಯಂದ್ರ ಸುಕೇಶ ಈ ಉರಿನ ಹೊರಗಡೆ ಕಾಲಿಟ್ಟಾಗೆ ಅವನನ್ನು ಮುಗಿಸಿ ಬಿಡು ನಿಂಗಿ ಮತ್ತೆ ನಾನನ ಸಾವಿನ ಸಾಕ್ಷಿ ಅವನೇ ಹಾಗೂ ನಿಂಗಿ, ಸುಕೇಶ ಹಾಗೂ ನಾನನನ್ನು ಯಾರು ಕಂಡುಹಿಡಿದ ಕಡೆ ಹೂತಾಕು
ಅಲ್ಲಿ ಸುಖೇಶ ತಕ್ಷಣ ಕೃಷ್ಣ ಕುಟೀರ ಮನೆಗೆ ಹೋಗಿ ವಿಭನನ್ನು ಕುರಿತು ನನ್ನ ತಂದೆಗೆ ಸ್ವಲ್ಪ ಹುಷಾರಿಲ್ಲ
ನಾನು ಕೂಡಲೇ ಹೋಗಬೇಕು ನಿಂಗಿಯನ್ನು ಬಸ್ ಸ್ಟ್ಯಾಂಡ್ ಅಲ್ಲೇ ನನಗೆ ಕಾಯ್ತಾ ನಿಂತಿದ್ದಾಳೆ ಬರುವಾಗ ಈ ಮನೆ ರಿಪೇರಿ ಮಾಡಲು ಮೇಸ್ತ್ರಿ ಅನ್ನು ಕರೆದುಕೊಂಡು ಬರುತ್ತೇನೆ
ವಿಭ : ಎಷ್ಟು ದಿನ ಆಗುತ್ತದೆ ವಾಪಸ್ ಬರುವಾಗ ನಾನು ಮತ್ತೆ ಸುರೇಂದ್ರ ಬಿಟ್ರೆ ಮನೆಯಲ್ಲಿ ಬೇರೆ ಯಾರು ಇಲ್ಲ
ನೀವು ಮತ್ತೆ ನಿಂಗಿ ಅಕ್ಕ ಇದ್ದರೆ ನನಗೂ ಸ್ವಲ್ಪ ಧೈರ್ಯ ಯಾಕೆ ಇಷ್ಟೊಂದು ಬೆವರುತ್ತಿದ್ದೀರಾ
ಸುಕೇಶ : ಇಲ್ಲ ಹಾಗೇನಿಲ್ಲ ಒಂದೇ ಸರಿ ತಂದೆಯ ಬಗ್ಗೆ ಕೇಳಿ ಸ್ವಲ್ಪ ಭಯವಾಗಿತ್ತು
ವಿಭಾ : ಆದಷ್ಟು ಬೇಗ ಹೋಗಿ ಬನ್ನಿ
ಸುಕೇಶ್ ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿ 3 ಲಕ್ಷದೊಂದಿಗೆ ಬಸ್ಸಿನಲ್ಲಿ ನಗರದಿಂದ ಹೊರಗೆ ಹೋದನು.
ಅವರು ಬಸ್ನಿಂದ ಇಳಿದ ನಂತರ ಅಪರಿಚಿತ ವ್ಯಾನ್ ಬಂದು ಅವರನ್ನು ಬಲವಂತವಾಗಿ ಒಳಗಡೆ ಹಾಕಿ ಎಳೆದುಕೊಂಡು ಹೋದರು