Harsha Shetty

Abstract Drama Others

4.5  

Harsha Shetty

Abstract Drama Others

ಕೃಷ್ಣ ಕುಟೀರ ಭಾಗ 20 ಸೌಜನ್ಯ ಕೊಲೆ

ಕೃಷ್ಣ ಕುಟೀರ ಭಾಗ 20 ಸೌಜನ್ಯ ಕೊಲೆ

4 mins
341


 

ಸೌಜನ್ಯ : ನೋಡು ಸುರೇಂದ್ರ ಇನ್ನು ನನ್ನ ಭಾವ ಜಯಂದ್ರ ನಿನಗೆ ಹೆಚ್ಚು ಸಮಯ ಕೊಡಲ್ಲ ಇವತ್ತೇ ಸಹಿ ತಕೊಂಡ್ರೆ ಸರಿ ಇಲ್ಲದಿದ್ದರೆ ನನ್ನ ನಿನ್ನ ಮದುವೆಯನ್ನು ಮರೆತು ಬಿಡು 

 ಸುರೇಂದ್ರ : ಅಯ್ಯೋ ಹಾಗೆ ಹೇಳಬೇಡ ಕಣೆ ಎಷ್ಟೋ ಸರಿ ಪತ್ರದಲ್ಲಿ ಸಹಿ ತಗೋಳಲು ಪ್ರಯತ್ನ ಮಾಡಿದ್ದೇನೆ ಆದರೆ ಅಪ್ಪನ ಮತ್ತೆ ಅಣ್ಣನ ಹತ್ತಿರ ಹೋದರೆ ಬಾಯಿ ತೊದಲುತ್ತದೆ ಹಾಗೂ ಕೈಕಾಲು ನಡುಗಲು ಪ್ರಾರಂಭಿಸುತ್ತದೆ 

 ಸೌಜನ್ಯ : ನೀನು ಒಬ್ಬ ಹೆದರುಪುಕ್ಕಲ ಹೋಗಿ ಹೋಗಿ ನಿನ್ನನ್ನು ಪ್ರೀತಿಸಿದೆನಲ್ಲ ನನ್ನ ಗ್ರಹಚಾರ 


 ಅದೇ ಸಮಯಕ್ಕೆ ನಾನ ಬಂದು ಸೌಜನ್ಯನನ್ನು ಹಿಂದಿನಿಂದ ತಬ್ಬಿಕೊಂಡನು

 ಸೌಜನ್ಯ :loafer ಏನು ಮಾಡುತ್ತಾ ಇದ್ದೀಯ

 ಅದನ್ನು ನೋಡಿದ ಸುರೇಂದ್ರ ನಾನನನ್ನ ದೂರಕ್ಕೆ ದೂಡಿದನು 

ಸುರೇಂದ್ರ : ಒಬ್ಬ ಸಾಧಾರಣ ಮನೆಗೆಲಸದವನು ನೀನು ಎಷ್ಟು ಕೊಬ್ಬು ಹೋಗಿ ಇವಳನ್ನು ತಬ್ಬಿಕೊಳ್ಳಲಿಕ್ಕೆ 

 ನಾನಾ : ಇವಳು ನಿನ್ನತ್ರ ಚಕ್ಕಂದ ಆಡುವ ಮೊದಲು ನನ್ನೊಂದಿಗೆ ತುಂಬಾ ಸರಿ ಹಾಸಿಗೆ ಬಿಸಿ ಮಾಡಿದಳೇ

 ಏನೋ ಈಗ ನೀನು ಸಿಕ್ಕಿದಿಯ ಅದಕ್ಕೆ ನನ್ನನ್ನು ಮರೆತುಬಿಟ್ಟಿದ್ದಾಳೆ 

ಸುರೇಂದ್ರನಿಗೆ ಕೋಪವು ನೆತ್ತಿಗೇರಿತು "ಏನಂದೆ" ಅಂತ ಹೇಳುತ್ತಾ ನಾನನ ಕೆನ್ನೆಗೆ ಬಾರಿಸಿದ 

ಅದಕ್ಕೆ ಪ್ರತಿ ಉತ್ತರವಾಗಿ ನಾನಾ ಕೂಡ ಸುರೇಂದ್ರ ಕೆನ್ನೆಗೆ ಬಾರಿಸಿದ 

 ಸುರೇಂದ್ರ : ಹೇ ನಾನಾ ನೀನೊಬ್ಬ ಜಯಂದ್ರ ಮನೆಯಲ್ಲಿ ಜೀತದಾಳು ಹಾಗೂ ಕೆಳವರ್ಗದವನು ನಿನಗೆ ಎಷ್ಟು ಧೈರ್ಯ ನನ್ನ ಮೇಲೆ ಕೈ ಮಾಡಲಿಕ್ಕೆ ನಾನು ಯಾರ ಮತನಕೆ ಸೇರಿದವನೆಂದು ತಿಳಿದಿಲ್ಲವೇ ನಿನಗೆ !ಇದು ನನ್ನ ಅಪ್ಪ ಮತ್ತು ನನ್ನಣ್ಣನಿಗೆ ಗೊತ್ತಾದರೆ ನೀನು ಜೀವಂತವಾಗಿರುವುದಿಲ್ಲ 

 ನಾನ : ಹೊಗಳೋ ಗುಬಾಲ್ ಏನು ರಾಜರ ಮನೆತನ ನಿಂದು ನಿಮ್ಮ ಯೋಗ್ಯತೆ ನನಗೆ ತಿಳಿದಿಲ್ವಾ 

 ಸುರೇಂದ್ರ : ಏನೆಂದೇ ! ಎಂದು ಹೇಳಿ ಸಿಟ್ಟಿನಿಂದ ನಾನನ ಕಡೆಗೆ ಧಾವಿಸಿದನು ಆದರೆ ನಾನ ಸುರೇಂದ್ರಕ್ಕಿಂತ ದೇಹದಲ್ಲಿ ದೊಡ್ಡವನು ಹಾಗೂ ಶಕ್ತಿಶಾಲಿಯಾಗಿದ್ದ ಅವನು ಸುರೇಂದ್ರನನ್ನು ತುಂಬಾ ಸುಲಭವಾಗಿ ನಿಯಂತ್ರಿಸಿದನು ಹಾಗೂ ಸುರೇಂದ್ರ ಹತ್ರ ಹೇಗೆ ಬೆಕ್ಕು ಇಲಿಯನ್ನು ಸಾಯಿಸುವ ಮೊದಲು ಆಟ ಆಡುತ್ತದು ಹಾಗೆ ಆಟ ಆಡುತ್ತಿದ್ದನು 

 ಸುರೇಂದ್ರ ಪ್ರತಿ ಸಾರಿ ನಾನನ ಹತ್ರ ಹೊಡೆಯಲು ಧಾವಿಸಿದ ನಾನು ಪ್ರತಿ ಉತ್ತರವಾಗಿ ಸುರೇಂದ್ರನಿಗೆ ಬಾರಿಸುತ್ತಿದ್ದ ತನ್ನ ಪ್ರೀತಿಯ ಹುಡುಗಿಯ ಮುಂದೆ ತಾನು ಒದೆ ತಿನ್ನುವುದನ್ನು ತಿಳಿದು ಸುರೇಂದ್ರನಿಗೆ ಕೋಪವನ ನೆತ್ತಿಗೇರಿತು ನಾನಾನ್ನನ್ನು ಕೊಲ್ಲುವಷ್ಟು ಕೋಪ ಬಂತು

 ಸುರೇಂದ್ರ : ಹೇ ನಾನಾ ಇವತ್ತು ನಿನ್ನನ್ನು ಸಾಯಿಸಿಬಿಡ್ತೆ 

 ನಾನಾ : ನಿನ್ನಂತ ಶಂಡ ಹತ್ರ ಎಲ್ಲೋ ನನ್ನನ್ನು ಸಾಯಿಸ್ಲಿಕ್ಕೆ ಆಗ್ತದೆ ನೀ ಏನಿದ್ದರೂ ಚಿಕ್ಕ ಮಕ್ಕಳ ಜೊತೆ ಆಟ ಆಡಲಿಕ್ಕೆ ಹಾಗೂ ಹುಡುಗಿಯರ ಜೊತೆ ಚೆಕ್ಕಂದಡಲಿಕ್ಕೆ ಸರಿ ಗಂಡಸರ ಒಂದು ಗುಣ ಆದರೂ ನಿನ್ನಲ್ಲಿದೆಯಾ.ಸೌಜನ್ಯ ಹೇಗೆ ಈ ಶಂಡನನ್ನು ಪ್ರೀತಿಸುತ್ತಿದ್ದೀಯ. ಆಮೇಲೆ ನಾನಾ ತನ್ನ ಸೊಂಟದಿಂದ ಚಾಕುವನ್ನು ತೆಗೆದು ನನ್ನ ನೀನು ಮುಗಿಸುತ್ತೀಯಾ, ನಿನ್ನನ್ನು ನಾನು ಮುಗಿಸ್ತೀನ ಇವತ್ತು ನೋಡೇ ಬಿಡೋಣ 

ಸುರೇಂದ್ರನು ಸಿಟ್ಟಿನಿಂದ ಮತ್ತೊಮ್ಮೆ ನಾನನ ಹತ್ರ ದಾವಿಸಿದನು ನಾನಾ ಸುಮ್ಮನೆ ಅವನಿಗೆ ಚಾಕುನಲ್ಲ ಪ್ರಹಾರ ಮಾಡುವಾಗೆ ನಟಿಸಿದನು ಒಂದೆರಡು ಸಲಿ ಸುರೇಂದ್ರನ ಮೇಲೆ ಪ್ರಹಾರ ಮಾಡಿ ಸುರೇಂದ್ರನು ಆ ಪ್ರಹಾರಗಳನ್ನು ತಪ್ಪಿಸಿಕೊಂಡ ಮೂರನೇ ಪ್ರಹಾರ ಮಾಡುವಾಗ ನಾನಾ ಬೇಕೆಂದೆ ತನ್ನ ಚಾಕು ಕೈ ತಪ್ಪಿ ಬಿದ್ದ ಹಾಗೆ ನಟಿಸಿದನು ಆ ಚಾಕು ಸುರೇಂದ್ರನಿಗೆ ಸಿಕ್ಕಿತು ಆವಾಗಲೇ ಸುರೇಂದ್ರನ ಕೋಪವು ನೆತ್ತಿಗೇರಿತು ಚಾಕುವನ್ನು ಕೈಯಲ್ಲಿ ಹಿಡಿದುಕೊಂಡು

 ಸುರೇಂದ್ರ: ನಾನಾನ ಇವತ್ತು ನೀನು ಸತ್ತೇ

 ನಾನಾ : ಹೇ ಗುಬಾಲ್ ಚಾಕು ಹಿಡ್ಕೊಂಡ ಕ್ಷಣ ಯಾರು ಗಂಡಸಾಗಲ್ಲ ಕಣೋ! ನೀನು ಗಂಡಸೆ ಆಗಿದ್ರೆ ಚಾಕುವಿನಿಂದ ನನ್ನ ಮೇಲೆ ಒಂದು ಗಾಯವನ್ನು ಮಾಡಿ ತೋರಿಸು ಆವಾಗ ನೀನು ನಿನ್ನ ಅಪ್ಪನಿಗೆ ಹುಟ್ಟಿದವನೆಂದು ನಾನು ನಂಬುತ್ತೇನೆ 

 ಸುರೇಂದ್ರನ ಸಿಟ್ಟಿನಿಂದ ಮತ್ತೆ ಧಾವಿಸಿದನು ಎಷ್ಟೇ ಪ್ರಹಾರ ಮಾಡಿದರು ನಾನಾ ಸುಲಭವಾಗಿ ತಪ್ಪಿಸ್ಕೊಳ್ತಿದ್ದ 

 ಇದನ್ನೆಲ್ಲಾವನ್ನು ಸೌಜನೆಯು ತುಂಬಾ ಭಯದಿಂದ ನೋಡುತ್ತಿದ್ದಳು ನಾನಾ ಸುರೇಂದ್ರನ ಪ್ರಹಾರಗಳನ್ನು ತಪ್ಪಿಸಿಕೊಳ್ಳುತ ತಪ್ಪಿಸಿಕೊಳ್ಳುತ ಬಂದು ಸೌಜನ್ಯನ ಮುಂದೆ ನಿಂತನು 

 ನಾನಾ ಸೌಜನ್ಯಾನೋ ಹಿಂದೆ ಇರೋದನ್ನು ಗಮನಿಸಿ ಇದೇ ಸರಿಯಾದ ಸಮಯ ಸುರೇಂದ್ರನ ಕೋಪ ನೆತ್ತಿಗೇರಿದೆ ಸೌಜನ್ಯ ಕೂಡ ನನ್ನ ಸ್ವಲ್ಪನೆ ಹಿಂದೆ ಇದ್ದಾಳೆ ನಾನು ಸುರೇಂದ್ರನನ್ನು ಹೊಟ್ಟೆಗೆ ಪ್ರಹಾರ ಮಾಡಲು ಉರಿದುಂಬಿಸಿದರೆ ಹಾಗು ಪ್ರಹಾರವನ್ನು ತಪ್ಪಿಸಿಕೊಂಡರೆ ಅದು ಹೋಗಿ ಸೌಜನ್ಯಗೆ ತಾಗುವ ಅವಕಾಶ ತುಂಬಾ ಇದೆ 

 ನಾನ : ಏ ಗುಬಾಲ್ ಏನೋ ನಿನ್ನತ್ರ ಚಾಕು ಕೊಟ್ರು ಮರ್ಯಾದೆಕ್ಕೆ ನನ್ನ ಮೈಯಲ್ಲಿ ಒಂದು ಸಣ್ಣ ಗಯಾ ಮಾಡಿದರು ಬೇಜಾರಿಲ್ಲ ಥೂ ಯಾವ ಸೀಮೆ ಗಂಡ್ಸು ನೀನು 


 ಸುರೇಂದ್ರ ಅವಾಗ ಚಾಕುವಿಂದ ಹೊಟ್ಟೆಗೆ ತಿವಿಯಲು ಬಂದನು ಅದನ್ನು ನಿರೀಕ್ಷಿಸಿದ ನಾನಾ ಕೂಡಲೇ ಅದರಿಂದ ತಪ್ಪಿಸಿಕೊಂಡ ಚಾಕು ಹೋಗಿ ಸೌಜನ್ಯ ಗೆ ತಗಲಿತ್ತು ಆದರೆ ಅದು ಅವಳನ್ನು ಸಾಯಿಸುವಷ್ಟು ಒಳನುಗ್ಗಲಿಲ್ಲ

 ಆವಾಗ ನಾನಾ ಸುರೇಂದ್ರನ ಮಣಿಕಟ್ಟನ್ನು ಹಿಡಿದು ಮುಂದಕ್ಕೆ ದುಡಿದರು ಅವಾಗ ಚಾಕು ಪೂರ್ತಿಯಾಗಿ ಸೌಜನ್ಯನ ಹೊಟ್ಟೆಯ ಒಳಗೆ ನುಗ್ಗಿತು ಚಾಕುವಿನ ಏಟಿಗೆ ಸೌಜನ್ಯ ತೀವ್ರವಾಗಿ ಗಾಯಗೊಂಡು ತಕ್ಷಣ ಸಾವನಪ್ಪಿದಳು ಆವಾಗ ಅಲ್ಲಿಗೆ ಶೇಷನು ಬಂದು ತಲುಪಿದನು 

 ನಾನಾ : ಅಯ್ಯಯ್ಯೋ ಸುರೇಂದ್ರ ಜಯಂದ್ರ ನಾದಿನಿಯನ್ನು ಸಾಯಿಸಿ ಬಿಟ್ಟ ಎಂದು ಕೂಗುತ್ತಾ ಊರೆಲ್ಲ ಓಡಾಡಲಾರಂಭಿಸಿದನು

 ಸೌಜನ್ಯ ಸಾವನ್ನು ನೋಡಿ ಸುರೇಂದ್ರ ಕಲ್ಲು ಬಂಡೆ ಹಾಗೇ ನಿಂತನು 

 ಶೇಷ ನಾನಾ ಕೂಗಿಕೊಂಡು ಓಡುವುದನ್ನು ನೋಡಿ 

 ಶೇಷ ಸುರೇಂದ್ರನ ಹತ್ರ ಬಂದು 

 ಶೇಷ : ಸುರೇಂದ್ರ ಇದು ಏನು ಅನಾಹುತ ಮಾಡಿದಿಯೋ

 ಸುರೇಂದ್ರ : ಅಣ್ಣ ನಾನೇನು ಮಾಡಲಿಲ್ಲ ಅಣ್ಣ ಇದೆಲ್ಲ ಹೇಗಾಯ್ತು ಅಂತ ನನಗೆ ಗೊತ್ತಿಲ್ಲ ನನಗೆ ಜೈಲು ಹೋಗಲು ಇಷ್ಟ ಇಲ್ಲ ಅಣ್ಣ 

 ಶೇಷ : ನಿನ್ನ ಕೈಯಲ್ಲಿ ಚಾಕು ಇರುವುದನ್ನು ನೋಡಿ ಎಲ್ಲರೂ ನಿನ್ನನ್ನು ಕೊಲೆಗಾರನ ಅಂತ ಭಾವಿಸುತ್ತಾರೆ ಕೊಡು ಆ ಚಾಕುವನ್ನು ನನ್ನ ಕೈಲಿ ಕೊಡು ಎಂದು ಹೇಳಿ ಚಾಕುವನ್ನು ತೆಗೆದುಕೊಂಡನು 

 ಆವಾಗ ಅಲ್ಲಿಗೆ ಜಯಂದ್ರ ಊರು ಜನರೊಂದೆಗ ಓಡೋಡಿ ಬಂದನು 

 ಜಯಂದ್ರ : ಸುರೇಂದ್ರನನ್ನು ಕುರಿತು ಅಯ್ಯೋ ರಾಕ್ಷಸ ನನ್ನಲ್ಲಿದ್ದ ಕೋಪಕ್ಕೆ ನನ್ನ ನಾದಿನಿಯನ್ನೇ ಸಾಯಿಸಿಬಿಟ್ಟೆ. 

ಊರಿನ ಎಲ್ಲಾ ಜನರು ಅಲ್ಲಿ ಕುಡಿದರು ಹಾಗು ಈ ವಿಷಯ ಜಗನ್ನಾಥನಿಗೂ ತಲುಪಿತು 

 ಶೇಷ : ಇದರಲ್ಲಿ ಸುರೇಂದ್ರದೇನು ತಪ್ಪಿಲ್ಲ ನಿನ್ನ ನಾದಿನಿಯನ್ನು ಸಾಯಿಸಿದ್ದು ನಾನೇ ಯಾಕಂದ್ರೆ ಆಕೆ ಸುರೇಂದ್ರ ಜೊತೆ ಚಕ್ಕಂದ ಆಟ ಆಡುತ್ತಿದ್ದಳು ಒಂದೆರಡು ಸರಿ ಇವರನ್ನು ನೋಡಿ ಅವಳಿಗೆ ಸುರೇಂದ್ರನಿಂದ ದೂರ ಇರಲು ಎಚ್ಚರಿಕೆ ಕೊಟ್ಟಿದ್ದೆ ಆದರೆ ಆಕೆ ಅದಕ್ಕೆ ಬಗ್ಗಲಿಲ್ಲ ಆದ್ರಿಂದ ಸಾಯಿಸ್ಬಿಟ್ಟೆ 

ಅಲ್ಲೆ ಇದ್ದ ನಾನ

ನಾನ :ಇಲ್ಲ ಶೇಷಣ್ಣನವರು !!!

ಆವಾಗ ಪಕ್ಕದಲ್ಲಿ ವಿಜೇಂದ್ರ ನಾನ ಹೆಗಲ ಮೇಲೆ ಕೈ ಇಟ್ಟು ಮುಂದೆ ಹೇಳದಂತೆ ಸನ್ನೆಯನ್ನು ಮಾಡಿದನು 

 ಆವಾಗ ಅಲ್ಲಿ ಜಗನ್ನಾಥ ಮತ್ತು ವಿಭಾ ಕೂಡ ಓಡೋಡಿ ಬಂದರು 

 ಜಗನ್ನಾಥ : ಶೇಷ ನಾನ್ ನಂಬಲ್ಲ ಈ ಕೆಲಸ ನೀನು ಮಾಡಿದೆ ಅಂತ 

 ಶೇಷ : ಇಲ್ಲಪ್ಪ ನಾನೇ ಮಾಡಿರುವುದು ಇವಳಿಗೆ ಎಷ್ಟು ಹೇಳಿದರು ಸುರೇಂದ್ರದಿಂದ ದೂರವಿರುತ್ತಿರಲಿಲ್ಲ ಅದಕ್ಕೆ ಮಾತಿಗೆ ಮಾತು ಬೆಳೆದು ಕೋಪಗೊಂಡು ಇವತ್ತು ಇವಳನ್ನು ಸಾಯಿಸ್ಬಿಟ್ಟೆ 

 ಜಯಂದ್ರ : ನೋಡ್ರಪ್ಪ ನೋಡಿ ಕೃಷ್ಣ ಕುಟೀರ ಮನೆದವರು ಬಹಳ ಸಭ್ಯರು ನ್ಯಾಯ ದೇವತೆಗಳು ಎಂದು ಹೇಳುತ್ತಿದ್ದೀರಲ್ಲ ಈಗ ಏನಾಯ್ತು ನನ್ನ ಹದಿಹರೆಯದ ಪ್ರಾಯದ ನಾದಿನಿಯನ್ನು ಅನ್ಯಾಯವಾಗಿ ಸಾಯಿಸ್ಬಿಟ್ಟು ಇದು ಕೃಷ್ಣ ಕುಟೀರ ಮನೆದವರ ನ್ಯಾಯ ! ರಜೆಯಲ್ಲಿ ಕಾಲ ಕಳೆಯಲು ನನ್ನ ಮನೆಗೆ ಬಂದಳು ಈಗ ನಾನು ಅವಳ ಅಮ್ಮನಿಗೆ ಏನಂತ ಉತ್ತರ ಕೊಡಲಿ ಹೇಳ್ರಪ್ಪಾ ಎಂದು ಗಟ್ಟಿಯಾಗಿ ಅಳಲು ಪ್ರಾರಂಭಿಸಿದನು 

 ಆವಾಗ ಅಲ್ಲೇ ಇದ್ದ ಮಹಿಳೆಯುೊಬ್ಬಳು ಶ್ರೀಮಂತರೆಲ್ಲ ಬಡವರನ್ನು ಕಾಲ್ ಕಸ ದಾಗೆ ನೋಡುತ್ತಾರೆ ಆದರೆ ನಾನು ಜಗನ್ನಾಥದ ಕುಟುಂಬದವರು ಸಭ್ಯರೆಂದು ತಿಳಿದುಕೊಂಡಿದೆ ಇವರು ಕೂಡ ಅದೇ ಜಾತಿಗೆ ಸೇರಿದವರು ಅನ್ಯಾಯವಾಗಿ ತನ್ನ ಕುಟುಂಬದ ವರ್ಚಸ್ಗೆ ಆ ಹುಡುಗಿಯನ್ನು ಸಾಯಿಸಿಬಿಟ್ಟರು 

 ಅಲ್ಲೇ ಇದ್ದ ಮತ್ತೊಬ್ಬರು ವಿಶ್ವನಾಥ್ ಅವರು ತಮ್ಮ ಮಕ್ಕಳಿಗೆ ಯಾವ ಸಭ್ಯತೆಯನ್ನು ತಿಳಿಸಿಕೊಟ್ಟಿದ್ದರು ಅದನ್ನು ತಿಳಿಸಿಕೊಡಲು ತಮ್ಮ ಮಕ್ಕಳಿಗೆ ಜಗನ್ನಾಥ ವಿಫಲವಾಗಿದ್ದಾರೆ ಎಂದು ಹೇಳಿದರು 

 ಇದನ್ನು ಕೇಳಿದ ಜಗನ್ನಾಥನಿಗೆ ಎದೆಗೆ ಚಾಕು ಇರಿದಾಗೆ ಆಯಿತು 

 ಆವಾಗ ಅಲ್ಲಿಗೆ ಸಬ್ ಇನ್ಸ್ಪೆಕ್ಟರ್ ಮುರುಗನ್ ಬಂದು ತಲುಪಿದ ಅವನು ಶೇಷನನ್ನು ಬಂಧಿಸಿ ತನ್ನೊಂದಿಗೆ ಕರ್ಕೊಂಡು ಹೋದ 



Rate this content
Log in

Similar kannada story from Abstract