ಕೃಷ್ಣ ಕುಟೀರ ಭಾಗ-15
ಕೃಷ್ಣ ಕುಟೀರ ಭಾಗ-15
ಮರುದಿನ ಸುರೇಂದ್ರನು ತನ್ನ ಗೆಳೆಯರ ಜೊತೆ ಕ್ರಿಕೆಟ ಆಟ ಆಡುತ್ತಿರುವಾಗ ಆವಾಗ ಸೌಜನ್ಯ ಗ್ರೌಂಡ್ ಹೊರಗಡೆ ಬಂದು ನಿಂತಳು ಹಾಗೂ ಸುರೇಂದ್ರನನ್ನೇ ಗುರಾಯಿಸಲು ಪ್ರಾರಂಭಿಸಿದಳು
ಆಕೆಯನ್ನು ನೋಡಿದ ಸುರೇಂದ್ರ ಹಾಗೂ ಅವನ ಸಹಪಾಠಿಗಳು ಸೌಜನ್ಯನ ಸೌಂದರ್ಯಕ್ಕೆ ಸೋತು ಹೋದರು
ಕಿಶೋರ ಸುರೇಂದ್ರನನ್ನು ಕುರಿತು ಏನು ಮಗ ಆ ಹುಡುಗಿ ನಿನ್ನನ್ನೇ ಗುರಾಯಿಸ್ತಿದ್ದಾಳೆ ಏನ್ ಸೂಪರ್ ಆಗಿದ್ದಾಳೆ
ಸುರೇಂದ್ರ : ಅವಳನ್ನು ನೋಡಿ ಮುಗುಳ್ನಕ್ಕನು
ಅದಕ್ಕೆ ಅವಳು ಕೂಡ ಆತನನ್ನು ನೋಡಿ smile ಕೊಟ್ಟಳು
ಆಕೆ ನಗುವುದನ್ನು ನೋಡಿ ಸುರೇಂದ್ರನಿಗೆ ಸ್ವರ್ಗದ ಬಾಗಿಲು ತೆರೆದಂತಾಯಿತು
ಸುರೇಂದ್ರ ಕಿಶೋರನ್ನು ಕುರಿತು ಯಾರೋ ಇವಳು ಮುಂಚೆ ಯಾವತ್ತು ಈ ಊರಿನಲ್ಲಿ ನೋಡಲಿಲ್ಲ
ಕಿಶೋರ : ಜಯಂದ್ರನ ಸಂಬಂಧಿಕಳ ಅಂತ ಕಾಣಿಸ್ತಾ ಇದೆ
ಸುರೇಂದ್ರ : ಹಾಗಾದರೆ ನನಗೆ ಇದರ ಸಾವಾಸ ಬೇಡ ಮಗ ಜಯಂದ್ರನಿಗೂ ನಮ್ಮ ಕುಟುಂಬಕ್ಕೂ ಆಗಿಬರಲ್ಲ
ಕಿಶೋರ : ದಡ್ಡ ನನ್ನ ಮಗ ನೀನು , ಅಷ್ಟು ಸುಂದರ ಹುಡುಗಿಯೂ ನಿನ್ನನ್ನು ನೋಡಿ ಒಲಿದು ಬಂದಾಗ ನಿರಾಕರಿಸ್ತಿಯಲ್ಲ
ಆವಾಗ ಗ್ರೌಂಡಿನ ಹತ್ರ ಧಾವಿಸಿದ ಜಯೇಂದ್ರ ಏ ಸೌಜನ್ಯ ಇಲ್ಲಿ ನಿಂತು ಏನು ಮಾಡುತ್ತಿದ್ದೀಯಾ ಬಾ ಮನೆಗೆ ಹೋಗೋಣ
ಸೌಜನ್ಯ : ಹೂ ಬಾವ
ಜಯಂದ್ರ : ಹೇಗೆ ನಡೆಯುತ್ತಿದೆ ನಿನ್ ಲವ್ ಸ್ಟೋರಿ
ಸೌಜನ್ಯ : ಒಳ್ಳೆ ಪೇದೆ ತರ ಇದ್ದಾನೆ ಇವನೊಂದಿಗೆ ಲವ್ ಮಾಡಲು ನೀವು ನನ್ನನ್ನು ಅಷ್ಟು ದೂರದಿಂದ ಕರೆಸಿಕೊಂಡಿದೆ ಇಲ್ಲೇ ಹಳ್ಳಿಯಲ್ಲಿ ಯಾರು ಸಿಗಲಿಲ್ವಾ ಇವನನ್ನು ಇನ್ನು ಒಂದು ವಾರದಲ್ಲಿ ಪಟಾಯಿಸ್ತೀನಿ
ಆವಾಗ ಎದುರ್ಗಡೆಯಿಂದ ಶೇಷ ಬೈಕಿನಲ್ಲಿ ಹೋಗ್ತಾ ಇದ್ದಾ ಆತನನ್ನು ನೋಡಿ ಜಯಂದ್ರನಿಗೆ ಕೈ ಕಾಲು ನಡುಕಲು ಪ್ರಾರಂಭಿಸಿತು ಸೌಜನ್ಯ ಅದನ್ನು ಗಮನಿಸಿದಳು
ಸೌಜನ್ಯ : ಯಾರು ಆತ ಒಳ್ಳೆ ಮನ್ಮತಂತರ ಇದ್ದಾನೆ
ಜಯಂದ್ರ : ಆ ಸುರೇಂದ್ರನ ಅಣ್ಣ ಶೇಷ ಅಂತ
ಸೌಜನ್ಯ : ಆ ಸುರೇಂದ್ರನನ್ನು ಬಿಟ್ಟು ಈತನನ್ನು ಪಟಾಯಿಸುವ ಕೆಲಸ ಕೊಟ್ಟಿದ್ದಾರೆ ನಾನು ಮಾಡುತ್ತಿದ್ದೇನೆ
ಜಯಂದ್ರ : ಹೇಳಿದಷ್ಟು ಕೆಲಸ ಮಾಡು ಅನಾವಶ್ಯಕವಾಗಿ ಸುಮ್ಮನೆ ಬಾಲ ಬಿಚ್ಚಲು ಹೋಗಬೇಡ ಆದಷ್ಟು ಬೇಗ ಸುರೇಂದ್ರ ಪಟಾಯಿಸು ಆಮೇಲೆ ಮುಂದಿನ ಕೆಲಸ ಹೇಳ್ತೀನಿ
ಸೌಜನ್ಯ : ನಿಮ್ಮ ಕೆಲಸ ಆಯ್ತು ಅನ್ಕೊಳ್ಳಿ
ಸೌಜಿನ ದಿವಸ ಗ್ರೌಂಡಿನ ಹತ್ತಿರ ಹೋಗ್ತಾ ಇದ್ದಳು ಅವಳು ಬಂದಾಗ ಸುರೇಂದ್ರ ವಿಚಿತ್ರವಾದ ಕೋತಿ ಆಟ ಆಡುತ್ತಿದ್ದ ಆಕೆ ಅದಕ್ಕೆ ಸ್ಪಂದಿಸುತ್ತಾ ಮುಗುಳ್ನಕುತ್ತಿದ್ದಳು ಹೀಗೆ ಅನೇಕ ದಿನಗಳು ಕಳೆದವು
ಮನೆಯಲ್ಲಿ ಅವನಪ್ಪ ಮಾನಸಿಕವಾಗಿ ಕುಗ್ಗುತ್ತಿದ್ದರು ತಾತ ತೀರಿಕೊಂಡರು ಸುರೇಂದ್ರ ನಿಗೆ ಮಾತ್ರ ಸೌಜನ್ಯದ ಧ್ಯಾನ ರಾತ್ರಿ ಕನಸಲ್ಲೂ ಅವಳೇ ಬೆಳಿಗ್ಗೆ ಎದ್ದರೆ ಮೊದಲು ನೆನೆಸಿಕೊಂಡು ಅವಳನ್ನೇ ಕಮ್ಮಿ ಎಂದರೆ ನೂರು ಬಾರಿ ಅವಳ ಹೆಸರನ್ನು ಮನಸ್ಸಲ್ಲಿ ಹೇಳುವ ಆಕೆಯು ತನಗಾಗಿ ಹುಟ್ಟಿವಳೆಂದು ಅಂದುಕೊಂಡಿದ ಮದುವೆಯಾದರೆ ಆಕೆಯನ್ನು ಬಿಟ್ಟು ಬೇರೆ ಯಾರನ್ನು ಮದುವೆಯಾಗಲ್ಲ ಎಂದು ಪ್ರಮಾಣ ಕೂಡ ಮಾಡಿದ್ದ ಆದರೆ ಇನ್ನೂ ಕೂಡ ಆಕೆ ಹತ್ರ ಒಂದು ಮಾತು ಕೂಡ ಮಾತಾಡಲಿಲ್ಲ
ಜಯಂದ್ರ : ಬಂದು ಒಂದು ವಾರ ಆಯ್ತು ಸೌಜನ್ಯ ಇನ್ನು ಕೂಡ ನಿನ್ ಲವ್ ಸ್ಟೋರಿ ಮುಂದುವರಿಲೇ ಇಲ್ಲ
ಹೀಗೆ ಮಾಡ್ತಾ ಇದ್ರೆ ನಮ್ ಕೆಲಸ ಆದಾಗೆ
ಸೌಜನ್ಯ : ನಾನೇನು ಮಾಡಲಿ ಆತನೇ ಬಂದು ಮಾತಾಡ್ತಾನೆ ಅಂದುಕೊಂಡರೆ.....!!
ಜಯಂದ್ರ : ನಮಗೆ ಹೆಚ್ಚು ಸಮಯವಿಲ್ಲ ಆದಷ್ಟು ಬೇಗ ಕೆಲಸವಾಗಬೇಕು, ಅವನು ನಿನ್ನ ಮಾತಾಡ್ಸಲ್ಲ ಅಂದರೆ ನೀನೆ ಹೋಗಿ ಮಾತಾಡಿಸು
ಅಂದು ಸಂಜೆ ಸುರೇಂದ್ರ ತನ್ನ ಸಹಪಾಠಿಯೊಡನೆ ಆಡುತ್ತಿರುವಾಗ ಆತನು ಹೊಡೆದ ಒಂದು ಶರ್ಟ್ಗೆ ಸೌಜನ್ಯ good shot ಎಂದು ಕಿರಿಚಿದಳು ಅದನ್ನು ಕೇಳಿದ ಸುರೇಂದ್ರನಿಗೆ ಮನಫುಲಖಿತವಾಯಿತು ಅದನ್ನು ನೋಡಿದ ಸಹಪಾಠಿ ಕಿಶೋರನು ಬೇಕಂದೆ ಈಜಿಬಾಲ್ ಹಾಕಲು ಪ್ರಾರಂಭಿಸಿದನು ಸುರೇಂದ್ರನ ಪುನಾ ಪುನಾ ಶಾರ್ಟ್ ಹೊಡಿತಾ ಇದ್ದನು ಅದಕ್ಕೆ ಸೌಜನ್ಯವು ಗುಡ್ ಶರ್ಟ್ ಅಂತ ಪ್ರತಿಕ್ರಿಯೆಸುತ್ತಿದ್ದಳು ಮ್ಯಾಚ್ ಮುಗಿದ ಮೇಲೆ ಸುರೇಂದ್ರನತ್ರ ಬಂದು ನೀನು ತುಂಬಾ ಚೆನ್ನಾಗಿ ಹಾಡ್ತಿದ್ದೀಯಾ i really like you ಅಂತ ಹೇಳಿ ಅವನತ್ರ ಶೇಕ್ ಹ್ಯಾಂಡ್ ಮಾಡಿ ಕೈಯಲ್ಲಿ ಒಂದು ಚೀಟಿ ಕೊಟ್ಟು ಹೋದಳು ಸುರೇಂದ್ರ ತನ್ನ ಸಹಪಾಠಿ ಯಾರಿಗೂ ಕಾಣದಂತೆ ಆ ಚೀಟಿಯನ್ನು ಬಚ್ಚಿಟ್ಟುಕೊಂಡನು ಆಮೇಲೆ ಒಬ್ಬನೇ ಇರುವಾಗ ತೆರೆದು ನೋಡಿದನು ಅದರಲ್ಲಿ ನಾಳೆ 10 ಗಂಟೆಗೆ ನನ್ನನ್ನು ಭೇಟಿ ಆಗಲು ನಮ್ ಭಾವನಾದ ಜಯಂದ್ರ ತೋಟಕ್ಕೆ ಬಾ ಎಂದು ಬರೆದಿತ್ತು
ಸುರೇಂದ್ರನ ಮರುದಿನ ಟಿಪ್ ಟಾಪ್ ರೆಡಿಯಾಗಿ ಜಯಂದ್ರ ತೋಟದತ್ತ 10 ಗಂಟೆಗೆ ಧಾವಿಸಿದನು ಅಲ್ಲಿ ಆವಾಗ್ಲೇ ಸೌಜನ್ಯ ಅವನಿಗಾಗಿ ಕಾಯುತ್ತಿದ್ದಳು ಸೌಜನ್ಯನನ್ನು ನೋಡಿ ಸುರೇಂದ್ರ ಕೈಕಾಲು ನಡುಗಲು ಪ್ರಾರಂಭಿಸಿತು ಅವಳನ್ನ ಹೇಗೆ approach ಮಾಡಬೇಕಂತ ಸುರೇಂದ್ರನಿಗೆ ತಿಳಿದಿರಲಿಲ್ಲ ಆತನನ್ನು ನೋಡಿದ ಸೌಜನ್ಯ ಅವನತ್ರ ಬಂದು ಆತನ ಕೈ ಕಾಲು ನಡುಗುವುದನ್ನು ಅವಳು ಗಮನಿಸಿದಳು ಅವಳು ಸುರೇಂದ್ರ ಹತ್ರ ಹೋಗಿ ನೀವು ಯಾಕೆ ಇಷ್ಟೊಂದು ನರ್ವಸ ಆಗಿದ್ದೀರಾ ಹೆಣ್ಣಾದ ನಾನೇ ಇಷ್ಟು ಧೈರ್ಯವಾಗಿದ್ದೀನಿ.
ಸುರೇಂದ್ರ ನಡುಗುತ್ತ :ಇಲ್ಲ ಹಾಗೇನಿಲ್ಲ ಇದುವರೆಗೆ ನಾನು ಯಾವ ಹೆಣ್ಣಿನ ಜೊತೆ ಇಷ್ಟು ಹತ್ತಿರವಾಗಿ ಮಾತಾಡಲಿಲ್ಲ ಅದಕ್ಕೆ ಸ್ವಲ್ಪ ಭಯವಾಗುತ್ತಿದೆ