Harsha Shetty

Abstract Drama Classics

4.5  

Harsha Shetty

Abstract Drama Classics

ಕೃಷ್ಣ ಕುಟೀರ- ಭಾಗ-17

ಕೃಷ್ಣ ಕುಟೀರ- ಭಾಗ-17

3 mins
384


 ಮರುದಿನ ಸುರೇಂದ್ರ ತನ್ನ ಅಮ್ಮನ ಬಳಿ ಹೋಗಿ 

 ಸುರೇಂದ್ರ : ಅಮ್ಮ ನಿಮ್ಮೊಂದಿಗೆ ಸ್ವಲ್ಪ ಮಾತಾಡಬೇಕಿತ್ತು 

 ವಿಭ : ಏನೋ ಅದು 

 ಸುರೇಂದ್ರ : ಯಾಕೆ ನಾವು ಅ ಜಯಂದ್ರನಿಗೆ ನೂರು ಎಕರೆ ಜಮೀನು ಕೊಡಬಾರದು ಅದರಲ್ಲಿ ನಮ್ಮ ಊರಿಗೆ ತಾನೆ ಲಾಭ ತುಂಬಾ ಜನರಿಗೆ ಕೆಲಸವಾಗುತ್ತದೆ ಹಾಗೂ ಅವನು ನಮಗೆ patner ಕೂಡ ಮಾಡ್ತಾನಲ್ಲ 

 ವಿಭಾ : ಈ ಮಾತ್ನ ನನ್ ಮುಂದೆ ಹೇಳ್ದೆ ಆದರೆ ಅಪ್ಪಿ ತಪ್ಪಿ ಕೂಡ ನಿನ್ನ ಅಪ್ಪನ ಅಥವಾ ಅಣ್ಣನ ಮುಂದೆ ಹೇಳಬೇಡ ಇಬ್ಬರೂ ರುದ್ರತಾಂಡವಾಡ್ತಾರೆ ಅದುಸ ಆ ಜಯೆಂದ್ರ ಒಬ್ಬ ಕಂಟ್ರಿ ನಾಯಿ ಅವನು ಯಾರಿಗಾದರೂ ಒಳ್ಳೆಯದು ಮಾಡದುಂಟ 

 ಅದನ್ನು ಕೇಳಿ ಸುರೇಂದ್ರ ಏನು ಮಾಡುವುದಂತ ತೋಚಲಿಲ್ಲ ಇನ್ನು ನಾನು ಸೌಜನ್ಯವನ್ನು ಕಳಕೊಂಡಾಗೆ ಇಂದು ರಾತ್ರಿ ಹಗಲು ಚಿಂತಿಸುತ್ತಿದ್ದ ಹಗಲಿನ ನೆಮ್ಮದಿ ರಾತ್ರಿ ನಿದ್ದೆ ಎರಡನ್ನು ಕಳೆದುಕೊಂಡ 

 ಮೂರು ದಿನದ ನಂತರ ಸೌಜನ್ಯ ಸುರೇಂದ್ರನ ಫೋನ್ ಗೆ ಕಾಲ್ ಮಾಡಿದ್ಲು 

 ಸೌಜನ್ಯ : ಸುರೇಂದ್ರ ನಾನು ನನ್ ಮಾವನ ಜೊತೆ ಮಾತಾಡಿದ್ದೇನೆ ಅವರು ನಮ್ಮ ಮದುವೆಗೆ ಒಪ್ಪಿಕೊಂಡಿದ್ದಾರೆ 

 ಸುರೇಂದ್ರ ಸಂತೋಷಪಟ್ಟು : ಹೌದಾ ಅದೇಗೆ ಮಾಡಿದೆ

 ಸೌಜನ್ಯ : ನೀನು ನೂರು ಎಕರೆ ಜಮೀನಿನ ಕೊಡುಸ್ತಿಯಾ ಅಂತ ಹೇಳಿದಾಗ ತಕ್ಷಣ ಒಪ್ಕೊಂಡು 

ನಮ್ ಮಾವ ತುಂಬಾ ಒಳ್ಳೆಯವರು ಅವರಿಗೆ ನಿಮ್ಮ ಕುಟುಂಬದ ಮೇಲೆ ಯಾವುದೇ ದ್ವೇಷವಿಲ್ಲ ,ಆದರೆ ಅವರಿಗೆ ತನ್ನ ವ್ಯಾಪಾರದ ಮಧ್ಯೆ ಯಾರಾದರೂ ಬಂದರೆ ತಲೆಕೆಡುತ್ತದೆ,  ನೀನು ಪತ್ರದ ಮೇಲೆ ಸಹಿ ಹಾಕೊಂಡು ಬಂದ ಹಾಗೆ, ಹೀಗೆ ನಮ್ ಮದುವೆಯ ಬಗ್ಗೆ  ನಿನ್ನಮನೆಯವರ ಹತ್ರ ಮಾತಾಡಲು ಬರುವರೆಂದರು ನಿನ್ನ ಅಣ್ಣನಿಗೆ ಮದುವೆಯ ನಂತರವೇ ನಮ್ಮ ಮದುವಂತೆ ನಾನು ಅಲ್ಲಿವರೆಗೆ ಕಾಯಲು ರೆಡಿ ನಾವಿನ್ನು ಚಿಕ್ಕವರು ಇನ್ನೂ ಐದು-ಆರು ವರ್ಷ ನಂತರ ಮದುವೆಯಾಗಬಹುದು ಹಾಗಾದ್ರೆ ಯಾವಾಗ್ ಕಳಿಸ್ಲಿ ನನ್ ಮಾವನ 

 ಸುರೇಂದ್ರ : ನಾನು ಕೇವಲ ಅಮ್ಮನತ್ರ ಮಾತ್ರ ಮಾತಾಡಿದೆ ಅವರು ಹೇಳಿದ್ರು ನನ್ನಪ್ಪ ಮತ್ತೆ ಅಣ್ಣ ಇದಕ್ಕೆ ಒಪ್ಪಿಕೊಳ್ಳಲ್ಲ ಅಂತ 

 ಸೌಜನ್ಯ : ಹಾಗಾದ್ರೆ ನೀನು ಇನ್ನು ನಿನ್ನ ಅಪ್ಪ ಮತ್ತು ಅಣ್ಣನ ಜೊತೆ ಮಾತಾಡಲಿಲ್ಲ ನಾನೇ ಮೂರ್ಖಳು ನಿನ್ನ ನಂಬಿ ನನ್ ಮಾವನ ಜೊತೆ ಮಾತಾಡಿದೆ ನೋಡು ,ನಾನೇ ದಡ್ಡಿ ನಾನು ಇಲ್ಲಿ ಇದ್ದರೆ ನಿನ್ನದೇ ನೆನಪು ಬರ್ತದೆ ನಾನು ನಮ್ಮೂರಿಗೆ ಹೊರಟು ಹೋಗ್ತೀನಿ ಇನ್ನು ಯಾವತ್ತೂ ನನಗೆ ಮುಖ ತೋರಿಸಬೇಡ 

 ಎಂದು ಹೇಳಿ ಸೌಜನ್ಯ ಫೋನ್ ಇಟ್ಟಳು 

 ಇದನ್ನು ಕೇಳಿ ಸುರೇಂದ್ರನಿಗೆ ಹುಚ್ಚು ಹಿಡಿದಾಗ ಆಯ್ತು

 ತಾನು ಸೌಜನ್ಯಾನು ಕಳೆದುಕೊಳ್ಳುತ್ತೇನೆ ಎಂದು, ಇನ್ನು ತಾನು ಬದುಕಿ ಕೂಡ ಏನು ಪ್ರಯೋಜನವಿಲ್ಲ ಅಂತ ಅಂದುಕೊಳ್ಳ ತೊಡಗಿದನು 

 ಹೇಗಾದರೂ ಮಾಡಿ ತನ್ನ ಅಪ್ಪನ ಮತ್ತೆ ಅಣ್ಣನ ಸಹಿ ತಗೊಳ್ಳೇಬೇಕಂತ ನಿರ್ಧರಿಸಿದ 


ಮುಂದಿನ ದಿನ ಸುರೇಂದ್ರನ ಸೌಜನ್ಯಗೆ ಕಾಲ್ ಮಾಡಿ ನೀನು ಪತ್ರ ರೆಡಿ ಮಾಡ್ಕೋ ಬಂದು ನನ್ನತ್ರ ಕೊಡು ಸಹಿ ನಾತಗೊಳ್ತೀನಿ

 ಸೌಜನ್ಯ : ಇದಕ್ಕೆ ನಿನ್ನ ಅಪ್ಪ ಮತ್ತೆ ಅಣ್ಣ ಒಪ್ಪುತ್ತಾರೆ

 ಸುರೇಂದ್ರ : ಅವರನ್ನು ಒಪ್ಪಿಸುವ ಜವಾಬ್ದಾರಿ ನಂದು ನೀನು ಮಾತ್ರ ನನ್ನನ್ನು ಬಿಟ್ಟು ಹೋಗಬೇಡ ಎಂದು ಹೇಳಿ ಫೋನ್  ಇಟ್ಟನು

 ಸೌಜನ್ಯ ಜಯಂದ್ರನ ಕುರಿತು ನಿಮ್ಮ ಬಕ್ರ ಹಲಾಲ್ ಆಗ್ಲಿಕ್ಕೆ ರೆಡಿಯಾಗಿದ್ದಾನೆ

 ಜಯಂದ್ರ: ಏನು ಹಾಗಂದ್ರೆ

 ಸೌಜನ್ಯ : ನನ್ನ ಪ್ರಿಯತಮನಿಗೆ ಪತ್ರ ಮಾಡಿಕೊಡಿಸಬೇಕಂತೆ ಅವನು ಅವನ ಅಣ್ಣ ಮತ್ತೆ ಅಪ್ಪನತ್ರ ಸಹಿ ಹಾಕಿಸ್ಕೊಳ್ತಾನಂತೆ

 ಅದನ್ನು ಕೇಳಿದ ವಿಜಯೇಂದ್ರ

 ವಿಜಯೇಂದ್ರ : ಶಭಾಷ್ thats my girl

 ಜಯಂದ್ರ : ಆದರೆ ಸರ್ ಹುಡುಗ ಸಹಿ ತಗೊಂಡು ಬರ್ತಾನೆ ಅಂತ ನನಗೆ ನಂಬಿಕೆ ಇಲ್ಲ ಆತನಿಗೆ ಮಕ್ಕಳಾಟಿಗೆ ಬಿಟ್ರೆ ಅವನಪ್ಪ ಮತ್ತು ಅಣ್ಣನ ಹತ್ರ ಸಹಿ ತಗೊಳ್ಳುವಷ್ಟು ತಲೆ ಅಥವಾ ಧೈರ್ಯ ಎಲ್ಲಿದೆ 

 ವಿಜಯೇಂದ್ರ : ಅವನು ಒಪ್ಪಿಕೊಂಡಿದ್ದಾನೆ ಅಷ್ಟು ಸಾಕು, ತಲೆ ನಮ್ಮದು ಉಪಯೋಗಿಸೋಣ ಕೆಲಸ ಮಾತ್ರ ಅವನತ್ರ ಮಾಡಿಸೋಣ let me think how to do it ಸ್ವಲ್ಪ ಯೋಚನೆ ಮಾಡಿದ ನಂತರ 

ವಿಜಯೇಂದ್ರ :ನೀನು ಪತ್ರವನ್ನು ರೆಡಿ ಮಾಡ್ಕೋ ಆದರೆ ಈ ಸರಿ ಪತ್ರದಲ್ಲಿ ನೂರು ಎಕರೆ ಬದಲು ಕೃಷ್ಣ ಕುಟೀರ ಮನೆಯವರ ಹತ್ತಿರ ಇರುವ 430 ಎಕ್ರೆ ಎಂದು ಬರಿ ನಾವು ಅದರ ಮೇಲೆನೆ ಸಹಿ ತಗೊಳ್ಳುವ 

 ಸೌಜನ್ಯ : ಏನು ಸುರೇಂದ್ರನಿಗೆ ಓದಲು ಬರಲ್ವಾ ನಾನು ಆತನಿಗೆ ಹೇಳಿದ್ದು ನೂರು ಎಕರೆ, 435 ಅಂತ ಬರ್ಕೊಂಡ್ರೆ ಅವನು ನನ್ನ ಮೇಲೆ  ಶಂಕೆ ಪಡಲ್ವ 

 ಜಯಂದ್ರ : ನಿನಗೆ ಏನಾದರೂ ಅವನತ್ರ ಸಂಸಾರ ಮಾಡಲಿಕ್ಕೆ ಇದೆಯಾ ಮುಚ್ಚೆ ಬಾಯಿನ ಆದರೂ ವಿಜಯೇಂದ್ರ ಸರ್ ಹುಡುಗಿ ಹೇಳೋದ್ರಲ್ಲಿ point ಇದೆ 

 ಸುರೇಂದ್ರ ಪಾತ್ರವನ್ನು ಓದುವುದಿಲ್ಲ 435 ಎಕ್ಕರೆ ಅಂತ ಗೊತ್ತಾದ್ರೆ ಆತ ಏಕೆ ಸಹಿ ತಗೊಳ್ತಾನೆ

 ವಿಜಯೇಂದ್ರ : ಅವನು ಸಹಿ ತಗೊಂಡೆ ತಗೊಳ್ತಾನೆ ನೀವು ನಾನ್ ಹೇಳಿದಾಗೆ ಮಾಡು ಪತ್ರ ಬರ್ಕೊಂಡು ಬಾ

 ವಿಜೇಂದ್ರ : ಸೌಜನ್ಯನನ್ನು ಪಕ್ಕಕ್ಕೆ ಕರೆದು ಕಿವಿಯಲ್ಲಿ ಏನು ಹೇಳಿದರು 

 ಸೌಜನ್ಯ : ತಲೆಯೆಂದರೆ ತಲೆ ನಿಮ್ಮದೇ ವಿಜೇಂದ್ರ ಸರ್ 

 ಜಯಂದ್ರ : ಅದು ಏನಂತ ನನಗೂ ಸ್ವಲ್ಪ ಹೇಳಿ

ವಿಜೇಂದ್ರ ವಿಜೇಂದ್ರ ಕಿವಿಯಲ್ಲಿ ಹೇಳಿದನು

 ಜಯಂದ್ರ: ಸಾರ್ ನಿಮ್ಮ ತಲೆಯನ್ನು ಮ್ಯೂಸಿಯಂನಲ್ಲಿ ಇಟ್ಟು ಪೂಜೆ ಮಾಡಬೇಕು ಏನು ಐಡಿಯಾ ಸರ್ ನಿಮ್ದು 


 ಸೌಜನ್ಯ : ನನಗೆ ನನ್ನ ಅಭಿಮಾನಿಗಳ ಫೋನ್ ಬರ್ತಾ ಇದೆ ನಾನು ಹೋಗ್ತೀನಿ ನನ್ ರೂಮಿಗೆ 

 ವಿಜೇಂದ್ರ : ಈ ಹುಡುಗಿಗೆ ತಲೆ ಇಲ್ಲ ಆಕೆಗೆ ಕಾನೂನು ಗೊತ್ತಿಲ್ಲ ಆದರೆ ಇಷ್ಟು ದೊಡ್ಡ ದಂದೆ ನಡೆಸುವ ನೀನು ನಿನಗೂ ಬುದ್ಧಿ ಇಲ್ವಾ 

 ಜಯಂದ್ರ : ಯಾಕೆ ಸರ್, ಏನಾಯ್ತು

 ವಿಜಯೇಂದ್ರ : ಮತ್ತೇನು ಪತ್ರದಲ್ಲಿ 43 ಎಕ್ಕರೆ ಅಂತ ಬರೆದು ಆಮೇಲೆ ಸಹಿಯಾದ ಮೇಲೆ ಅದನ್ನು ಚೇಂಜ್ ಮಾಡಿದರೆ ಆಯ್ತು ಅಂತ ನಾನು ಹೇಳಿದರೆ ನೀನು ಅದಕ್ಕೆ ತಲೆ ಅಲ್ಲಾಡಿಸುತ್ತಿಯಲ್ಲ ಎಂಥ ಬೇವಕೋಪ ನೀನು ಆ ಶೇಷ ಏನು ಬೆರಳು ಚಿಪ್ಪು ಮಗು ಅವನು ಒಬ್ಬ smart lawyer courtnalli ನಾನು ಡಾಕ್ಯುಮೆಂಟ್ನ forge ಮಾಡ್ತೀವಿಂದು ಪ್ರೂ ಮಾಡಿ ಬಿಡ್ತಾನೆ 

ಆ ಜಗನ್ನಾಥ್ ಹತ್ರ ನಿಂಗಿ ಹೇಗಾದರೂ ಸಹಿ ಮಾಡ್ಕೊಂಡು ಬರ್ತಾಳೆ ಆದರೆ ಈ ಶೇಷ ನಮಗೆ ದೊಡ್ಡ problem ಈ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಒಂದು ಬಲಿ ಕೊಡಲೇಬೇಕು 

 ಜಯಂದ್ರ : ಹೌದು ಸರ್ ಶೇಷನ್ನು ಮುಗಿಸಿ ಬಿಡಿ ಆಮೇಲೆ ನಮ್ ಕೆಲಸ ಸಲೀಸಾಗಿ ಆಗುತ್ತದೆ. 

ವಿಜಯೇಂದ್ರ : ಶೇಷವನ್ನು ಮುಗಿಸಿದರೆ ಅವನ ಹಿಂದೆ ಅವನು ಕೇಳುವವರು ಅವನ ತಂದೆ ಜಗನ್ನಾಥ, ಈ ಊರಿನ ಜನ, ನಿಷ್ಠಾವಂತ ಇನ್ಸ್ಪೆಕ್ಟರ್ ಮುರುಗ ನಿದ್ದಾನೆ ಆ ಶೇಷನನ್ನು ಮುಗಿಸಿದರು ನನಗೆ ಸಮಾಧಾನ ಆಗಲ್ಲ ಬೆರಳು ಚೀಪೋ ಹುಡುಗ ಆ ದಿನ ಬಂದು ನನಗೆ ವಿಜಯೇಂದ್ರನಿಗೆ ಚಾಲೆಂಜ್ ಮಾಡಿ ಹೋದನಲ್ಲ ಅವನನ್ನು ಇಡೀ ಜೀವನ ನರಳುವಾಗಿ ಮಾಡ್ತೀನಿ ಸಾವು ಅವನಿಗೆ ತುಂಬಾ ಕಡಿಮೆಯಾದ ಪನಿಶ್ಮೆಂಟ್ 


 ಜಯಂದ್ರ : ಇದು, ಸರ್ ಹೌದು ಕೃಷ್ಣ ಕುಟೀರ ಮನೆಯವರು ನರಳಿ ನರಳಿ ಸಾಯ್ಬೇಕು ಮುಖ್ಯವಾಗಿ ಶೇಷ ಮತ್ತು ಜಗನ್ನಾಥ ಹಾಗಾದರೆ ಬಲಿ ಶೇಷನಲ್ಲದೆ ಯಾರದು ಕೊಡುವುದು ಜಗನ್ನಾಥನ್ದು ಅಥವಾ ಸುರೇಂದ್ರದ?


Rate this content
Log in

Similar kannada story from Abstract