ಕೃಷ್ಣ ಕುಟೀರ ಭಾಗ -19
ಕೃಷ್ಣ ಕುಟೀರ ಭಾಗ -19
ನಾನಾ : ಕ್ಷಮಿಸಿ ಸರ್ ಇಂಥ ಹಲ್ಕಾ ಕೆಲ್ಸ ಎಲ್ಲ ನಾವು ಮಾಡಲ್ಲ
ಜಯಂದ್ರ : ಮಾಡೋ ನಿನಗೆ ಈ ಕೆಲಸಕ್ಕೆ 50 ಸಾವಿರ ಕೊಡ್ತೀನಿ
ನಾನಾ : ಆಗಲ್ಲ ಸಾಹೇಬ್ರೆ ಬೇಕಾದ್ರೆ ಕೆಲಸ ಬಿಡ್ತೀವಿ ಆದರೆ ಇಂತಹ ಕೆಲಸ ಮಾಡಲ್ಲ
ಆವಾಗ ವಿಜೇಂದ್ರ ನಾನಾ ಹೆಗಲ ಮೇಲೆ ಕೈಹಾಕಿ ಅವನನ್ನು ಕರೆದುಕೊಂಡು ತನ್ನ ರೋಲ್ಸ್ ರಾಯ್ ಕಾರ್ ಹತ್ರ ಹೋದ ನಾನ ಯಾವಾಗ ನೋಡಿದರೂ ನೀನು ಈ ಕಾರಿನ ಒಳಗಡೆ ಇಣುಕಿ ನೋಡುತ್ತಾ ಇರ್ತೀಯ ನಿನ್ನತ್ರ ಇಂತಹ ಕಾರು ಬರುವುದು ಯಾವಾಗ
ನಾನಾ : ಅಯ್ಯೋ ಬಿಡಿ ಸಾಹೇಬರೇ ನಾವೆಲ್ಲ ಇಂಥ ಕಾರನ್ನು ನೋಡುವುದು ಕನಸಿನಲ್ಲೇ ನಮ್ಮದು ತಿರುಕನ ಕನಸು
ವಿಜಯೇಂದ್ರ : ಈಗ ನಿನ್ನ ಕನಸನ್ನು ನೆನೆಸು ಮಾಡಬಹುದು ನಾನ್ ಹೇಳಿದ ಕೆಲಸ ಮಾಡು ಈ ನಾಲ್ಕು ಕೋಟಿಯ ಕಾರು ನಿನ್ನದು
ನಾನಾ ಕಾರು ತನ್ನದು ಆಗುತ್ತದೆ ಎಂದಕೊಂಡರೆ ಕೂಡಲೇ ಮಗ್ನನಾದನು ಈ ನಾಲ್ಕು ಕೋಟಿಯ ಕಾರನ್ನು ಮಾರಿದರೆ ಕಮ್ಮಿ ಎಂದರೆ ತನಗೆ ಎರಡು ಕೋಟಿ ಆದರೂ ಸಿಕ್ಕಬಹುದು ಆ ಎರಡು ಕೋಟಿಯಲ್ಲಿ ತಾನು ಏನೆಲ್ಲ ಮಾಡಬಹುದು ಇಡೀ ಜೀವನ ಪೂರ್ತಿ ಜೀತ ಮಾಡಿದರು ತನಗೆ ಅಷ್ಟೊಂದು ಕಾಸು ಕಮಾಯಿಸಲು ಆಗಲ್ಲ ಇಡೀ ಜೀವನ ತಾನು ರಾಜನ ತರ ಇರಬಹುದು
ನಾನಾ : ಆಯ್ತು ಸರ್ ನೀವು ಹೇಳಿದ ಹಾಗೆ ಮಾಡುತ್ತೇನೆ
ವಿಜೇಂದ್ರ : thats my boy
ಅಂದು ಸುರೇಂದ್ರನು ಎಂದಿನಂತೆ ಸೌಜನ್ಯನನ್ನು ಭೇಟಿಯಾಗಲು ಹೋದನು ಸೌಜನ್ಯ ಹಾಗೂ ಸುರೇಂದ್ರನು ಭೇಟಿಯಾದರು ಸೌಜನ್ಯ ಸುರೇಂದ್ರ ಪತ್ರ ಕೊಟ್ಟು ಇದರಲ್ಲಿ ಸಹಿ ಹಾಕೊಂಡು ಬಾ ಎಂದು ಹೇಳಿದಳು ಸುರೇಂದ್ರ ಹೇಗಾದರೂ ಮಾಡಿ ಪತ್ರಕೆ ಸಹಿ ಹಾಕೊಂಡು ಬರ್ತೀನಿ ಅಂತ ಸೌಜನ್ಯಕ್ಕೆ ಹೇಳಿದನು ಆದರೆ ಮುಂದಿನ ಎರಡು ದಿನ ಸುರೇಂದ್ರನಿಗೆ ಅಣ್ಣ ಮತ್ತು ಅಪ್ಪನ ಜೊತೆ ಮಾತಾಡಲು ಭಯವಾಗುತ್ತಿತ್ತು ಹಾಗೂ ಅವನು ಪತ್ರದಲ್ಲಿ ಏನಿದೆ ಅಂತ ಸಹ ನೋಡಲಿಲ್ಲ ಇದನ್ನು ಕಂಡ ವಿಜೇಂದ್ರನು ಸೌಜನ್ಯನನ್ನು ಕುರಿತು ಒಂದು ವಾರವಾಯಿತು ಆದರೂ ನಿನ್ನ ಸುರೇಂದ್ರನದು ಎನು ಪತ್ತ ಇಲ್ಲ ಆತನಿಗೆ ಫೋನ್ ಮಾಡಿ ಕೇಳು ಸೌಜನ್ಯನು ಸುರೇಂದ್ರನಿಗೆ ಫೋನ್ ಮಾಡಿ ಪತ್ರದ ಬಗ್ಗೆ ಕೇಳಿದಳು ಸುರೇಂದ್ರನು ಪತ್ರದಲ್ಲಿ ಸಹಿ ಇವತ್ತು ತಗೊಳ್ತೀನಿ ನಾಳೆ ತಗೊಳ್ತೀನಿ ಎಂದು ಹೇಳಿ ಹಾಗೆ ಒಂದು ವಾರ ಕಳೆದನು
ವಿಜೇಂದ್ರ : ಇನ್ನು ಸುರೇಂದ್ರನತ್ರ ಈ ಕೆಲಸ ಆಗಲ್ಲ ನಾನಾ ತಯಾರಾಗಿರು ಆಮೇಲೆ ವಿಜಯೇಂದ್ರನು ಸೌಜೇನಿನ ಕೊಠಡಿಗೆ ಹೋಗಿ ಸೌಜನ್ಯ ಇವತ್ತು ಸುರೇಂದ್ರನನ್ನು ಕರೆದು ಸ್ವಲ್ಪ ದಬಾಯಿಸು ಅಥವಾ ಅವನು ಯಾವತ್ತೂ ಕೂಡ ಸಹಿ ತೆಗೆದುಕೊಂಡು ಬರಲ್ಲ ಸೌಜನ್ಯ ಎಂದಿನಂತೆ ಸುರೇಂದ್ರನನ್ನ ಭೇಟಿಯಾಗಲು ಕರೆದಳು ಸೌಜನ್ಯ ಮತ್ತು ಸುರೇಂದ್ರ ಜಯಂದ್ರನ ತೋಟದಲ್ಲಿ ಭೇಟಿಯಾದರು ಅದೇ ಸಮಯಕ್ಕೆ ನಾನಾ ತೋಟದ ಹತ್ತಿರ ಧಾವಿಸಿದನು
ಆಮೇಲೆ ಜಯಂದ್ರನು ಕೋಕುವನ್ನು ಕರೆದು ನೋಡು ಕೋಕು ನೀನು ಹೋಗಿ ಶೇಷನನ್ನು ಹೇಗಾದರೂ ಮಾಡಿ ಸುರೇಂದ್ರ ಮತ್ತು ಸೌಜನ್ಯ ಭೇಟಿಯಾಗುವ ಸ್ಥಳಕ್ಕೆ ಬರುವ ಹಾಗೆ ಮಾಡು.
ವಿಜಯೇಂದ್ರ : ನಾನಾ ಆ ಶೇಷ ಬರುವ ಮೊದಲು ನೀನು ನಿನ್ನ ಕೆಲಸವನ್ನು ಮುಗಿಸಿಬೇಕು
ನಾನ : ಹಾಗೆ ಆಗುತ್ತದೆ ಸರ್
ಇಲ್ಲಿ ಶೇಷನೂ ತನ್ನ ಕೆಲಸವನ್ನು ಮುಗಿಸಿ ಮನೆಯತ್ರ ದಾವಿಸುತ್ತಿದ್ದನು ಆವಾಗ ಅವನನ್ನು ಕೋಕು ತಡೆದು
ಕೋಕು : ದನಿ ನಿಮ್ ತಮ್ಮ ಜಯಂದ್ರ ನಾದಿನಿ ಜೊತೆ ನಮ್ಮ ತೋಟದಲ್ಲಿ ಚಕ್ಕಂದ ಆಟ ಆಡುತ್ತಿದ್ದಾನೆ ಇದೆಲ್ಲ ಜಯಂದ್ರ ಗೊತ್ತಾದರೆ ಆತ ನಿಮ್ಮ ತಮ್ಮನನ್ನು ಮುಗಿಸಿ ಬಿಡುತ್ತಾನೆ ದಯವಿಟ್ಟು ಬೇಗ ಹೋಗಿ ನಿಮ್ ತಮ್ಮನನ್ನು ಕಾಪಾಡಿಕೊಳ್ಳಿ
ಅದನ್ನು ಕೇಳಿದ ಶೇಷ ಜಯಂದ್ರನ ತೋಟದತ್ತ ಧಾವಿಸಿದನು
ಇಲ್ಲಿ ಕೋಕು ನಾನನಿಗೆ ಫೋನ್ ಮಾಡಿ ನೋಡು ನಾನಾ ಶೇಷಣ್ಣನವರು ತೋಟದ ಹತ್ತಿರ ಧಾವಿಸುತ್ತಿದ್ದಾರೆ
ಇಲ್ಲಿಂದ ಅಲ್ಲಿಗೆ ಬರಲು ಕಡಿಮೆ ಎಂದರೆ ಮೂವತ್ತು ನಿಮಿಷ ವಾಗುತ್ತದೆ ನೀನು ನಿನ್ನ ನಾಟಕವನ್ನು ಶುರು ಮಾಡು ಹಾಗೆ ನಿನಗೆ ವಿಜೇಂದ್ರ ಸಾಹೇಬರಿಂದ ಸಿಗುವ ಹಣದಲ್ಲಿ ನನಗೂ 20 ಲಕ್ಷ ಕೊಡ್ತೀನಿ ಅಂತ ಹೇಳಿದಿಯಾ ಅದನ್ನು ಮರಿಬೇಡ
ನಾನ : ಇಲ್ಲ ಕಣೋ ನಿನಗೆ ನಾನು ಕೊಟ್ಟೆ ಕೊಡ್ತೀನಿ ನಾನು ಆ ಶ್ರೀಮಂತರ ತರ ಸ್ವಾರ್ಥಿಯಲ್ಲ ನನಗೆ ಒಂದು ಸೂರು ನನ್ನ ಅಮ್ಮನ ಚಿಕಿತ್ಸೆಗೆ ಹಣ ಮತ್ತೆ ತಿರುಗಲು ನನ್ನ ಹೆಂಡತಿ ಜೊತೆ ಒಂದು ಚಿಕ್ಕ ಕಾರು ಹಾಗೂ ನನಗೆ ಜೀವನ ಸಾಗಿಸಲು ಒಂದು 10 ದನಗಳನ್ನು ತಗೊಳ್ತೀನಿ ಅದು ಬಿಟ್ರೆ ಬೇರೆ ಏನು ಆಸೆ ಇಲ್ಲ ಕಣೋ ಮಿಕ್ಕಿದ ಹಣವನ್ನು ನಮ್ಮ ಮನೆ ದೇವರಿಗೆ ಒಂದು ಬಂಗಾರದ ಮುಕುಟವನ್ನು ಮಾಡ್ತೀನಿ ಯಾಕೆಂದರೆ ಮಾಡುತ್ತಿರುವುದು ಪಾಪದ ಕೆಲಸ ಬೇಜಾರು ಆಗುತ್ತಿದೆ ನಮ್ಮೆಲ್ಲ ಸ್ವಾರ್ಥಕ್ಕಾಗಿ ಹದಿಹರೆದ ಹುಡುಗಿಯನ್ನು ಬಲಿಕೊಡುತ್ತಿದ್ದೀವಿ ಆಯ್ತು ಫೋನ್ ಇಡು ಶೇಷಣ್ಣನು ಬರುತ್ತಿದ್ದಾರೆ ನಾಟಕ ಶುರು ಮಾಡಬೇಕು ಮತ್ತೆ ಕಾಲ್ ಮಾಡ್ತೀನಿ ನಾನ ತನ್ನ ಫೋನನ್ನು ಇಟ್ಟನು ಹಾಗೂ ಸೌಜನ್ಯ ಮತ್ತು ಸುರೇಂದ್ರನ ಇದ್ದ ಕಡೆಗೆ ಧಾವಿಸಿದನು